ಪ್ರಜಾಸ್ತ್ರ ಸುದ್ದಿ
ಬಾಗಲಕೋಟೆ: ಜಿಲ್ಲೆಯ ನವನಗರದಲ್ಲಿ 7 ವರ್ಷದ ಬಾಲಕಿಯನ್ನು ಕಳೆದ ರಾತ್ರಿ ಅಪಹರಣ ಮಾಡಲಾಗಿತ್ತು. ಬಾಲಕಿ ಮನೆಗೆ ಬರುವುದರೊಂದಿಗೆ ಈ ಪ್ರಕರಣ ಸುಖಾಂತ್ಯ ಕಂಡಿದೆ. ಹೆತ್ತವರಲ್ಲಿ ಸಂತಸ ಮನೆ ಮಾಡಿದೆ.
ಅಪಹರಣಕಾರರೇ ಬಾಲಕಿ ಕೃತಿಕಾಳನ್ನು ಮನೆಯ ಮುಂದೆ ಬಿಟ್ಟು ಪರಾರಿಯಾಗಿದ್ದಾರೆ. 16 ಗಂಟೆಗಳ ಬಳಿಕ ಬಾಲಕಿ ಮನೆಗೆ ಬಂದಿದ್ದು, ತಿಪ್ಪಣ್ಣ ಹಾಗೂ ಸುನಿತಾ ದಂಪತಿಗೆ ಹೋದ ಜೀವ ವಾಪಸ್ ಬಂದಂತಾಗಿದೆ. ಕಾರಿನಲ್ಲಿ ಅಪಹರಣ ಮಾಡಿದವರು ಡಿಕ್ಕಿ ಹಾಕಿದ್ದರಂತೆ. ಒಂದಿಬ್ಬರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಬಾಲಕಿ ಹೇಳಿದ್ದಾಳೆ.