ಪ್ರಜಾಸ್ತ್ರ ಅಪರಾಧ ಸುದ್ದಿ
ಭದ್ರಾವತಿ: ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಕ್ಕೆ ನಗರಸಭೆಯ ಗುತ್ತಿಗೆ ನೌಕರನನ್ನ ಇರಿದು ಕೊಲೆ ಮಾಡಲಾಗಿದೆ. 24 ವರ್ಷದ ಸುನೀಲ ಕೊಲೆಯಾದ ದುರ್ದೈವಿ. ಶ್ರೀಕಂಠ ಅನ್ನೋ ಇನ್ನೊಬ್ಬ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಂಗಳವಾರ ಸಂಜೆ ಸುನೀಲ ಸಹದ್ಯೋಗಿ ಶ್ರೀಕಂಠ ಜೊತೆಗೆ ಅನ್ವರ್ ಕಾಲೋನಿ ಕಡೆ ಹೋಗಿದ್ದಾರೆ. ಈ ವೇಳೆ ನಿಂತಿದ್ದ ಯುವಕರ ಗುಂಪಿಗೆ ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಾರೆ. ಈ ವೇಳೆ ಗಲಾಟೆಯಾಗಿ ಮಾರಕಾಸ್ತ್ರಗಳಿಂದ ಇರಿಯಲಾಗಿದೆ.
ಗಾಯಗೊಂಡ ಸುನೀಲ ಹಾಗೂ ಶ್ರೀಕಂಠನನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಿಸದೆ ಸುನೀಲ ಮೃತಪಟ್ಟಿದ್ದಾನೆ. ಈ ಸಂಬಂಧ ನಾಲ್ವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.