ಅಕ್ಕನಿಗೆ ಕಿರುಕುಳ: ಮಾವನನ್ನೇ ಕೊಂದ ಬಾಮೈದುನ

255

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ತಮ್ಮನೇ ಅಕ್ಕನ ಗಂಡನನ್ನ ಹತ್ಯೆ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಜನವರಿ 16 ರಂದು ಕೆಇಬಿ ನೌಕರ ಸಂತೋಷನ ಕೊಲೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು 48 ಗಂಟೆಯಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ.

ಸಂತೋಷ ಬಾಮೈದುನ ಸುದಿನಕುಮಾರ, ಈತನ ಸ್ನೇಹಿತರಾದ ಎಚ್.ಬಿ ಸತೀಶ, ಬಿ.ಎಸ್ ಸುರೇಶ ಹಾಗೂ ಅನುಕೂಲ್ ಅನ್ನೋ ಮೂವರು ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಹೂವಿನಹಳ್ಳಿ ಕಾವಲ್ ಬಳಿ ಜನವರಿ 16ರಂದು ಪಾರ್ಟಿಗೆಂದು ಕರೆದುಕೊಂಡು ಹೋಗಿ 8 ಸುತ್ತಿನ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

ಸತೋಷನ ಕೊಲೆಗೆ ಕಾರಣಾಗಿದ್ದು, ಪತ್ನಿಯನ್ನ ಕಿರುಕುಳ ಕೊಡ್ತಿರುವುದಂತೆ. 13 ವರ್ಷಗಳ ಹಿಂದೆ ಸುದಿನಕುಮಾರ ಅಕ್ಕನನ್ನ ಪ್ರೀತಿಸಿ ಮದುವೆಯಾಗಿದ್ದ ಸಂತೋಷ ಕುಡಿದು ಕಿರುಕುಳ ಕೊಡ್ತಿದ್ದನಂತೆ. ಎಷ್ಟೇ ರಾಜಿ ಸಂಧಾನ ಮಾಡಿದ್ರೂ ಸರಿ ಹೋಗಿರ್ಲಿಲ್ಲವಂತೆ. ಇದ್ರಿಂದ ಬೇಸತ ಸಹೋದರ ಮಾವನನ್ನೇ ಹತ್ಯೆ ಮಾಡಿದ್ದಾನೆ. ಕೊಲೆಯಾದ ಸಂತೋಷನಿಗೆ ಇಬ್ಬರು ಮಕ್ಕಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!