ಪ್ರಜಾಸ್ತ್ರ ಅಪರಾಧ ಸುದ್ದಿ
ಮೈಸೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತರಿಬ್ಬರ ನಡುವೆ ನಡೆದ ಜಗಳ ಕೊನೆಗೆ ಸಾವಿನಲ್ಲಿ ಅಂತ್ಯವಾಗಿದೆ. ನಗರದ ಬೀಡಿ ಕಾಲೋನಿಯ ಟೀ ಅಂಗಡಿಯೊಂದರ ಮುಂದೆ ಈ ಘಟನೆ ನಡೆದಿದೆ. ಆಸಿಫ್ ಬಿಲ್ಲಾ ಮೃತ ಯುವಕ.
ಟೀ ಅಂಗಡಿ ಹತ್ತಿರ ಕುಳಿತಿದ್ದ ಆಸಿಫ್ ಜೊತೆಗೆ ಸ್ನೇಹಿತ ಸಲೀಂ ಪಾಷಾ ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಸಲೀಂ, ಮರದ ದೊಣ್ಣೆಯಿಂದ ಆಸಿಫ್ ತಲೆಗೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಇತ್ತ ಗಾಯಗೊಂಡಿರುವ ಸಲೀಂ ಪಾಷಾನನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತರು, ಡಿಸಿಪಿ ಸೇರಿ ಉದಯಗಿರಿ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.