ಇಂಡಿಯಲ್ಲಿ ಹತ್ಯೆ: ಓರ್ವನ ಬಂಧನ

353

ಪ್ರಜಾಸ್ತ್ರ ಅಪರಾಧ ಸುದ್ದಿ

ಇಂಡಿ: ಜಮೀನು ವಿಚಾರಕ್ಕಾಗಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯವಾಗಿದ್ದು, ಹತ್ಯೆಗೈದಿದ್ದ ಪ್ರಮುಖ ಆರೋಪಿಯನ್ನು ಇಂಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಭಾಷ್ ಬಂಡೆಗಾರ ಬಂಧಿತ ಪ್ರಮುಖ ಆರೋಪಿಯಾಗಿದ್ದು, ಇನ್ನುಳಿದ ಐವರು ಆರೋಪಿಗಳ ಈ ಪ್ರಕರಣದಲ್ಲಿ ಯಾವ ತರಹ ಸಾಮೀಲಾಗಿದ್ದಾರೆ ಎಂದು ವಿಚಾರಣೆ ಬಳಿಕ ತಿಳಿಯಲಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.

ನಿನ್ನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲೋಣಿ ಕೆ.ಡಿ ಗ್ರಾಮದಲ್ಲಿ ಮಚ್ಚೇಂದ್ರ ಬಂಡೆಗಾರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈಯಲಾಗಿತ್ತು. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಆರು ಜನರು ಸಾಮೀಲಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅದರಲ್ಲಿ ಈಗಾಗಲೇ ಸುಭಾಷ್ ಪಾಟೀಲನ್ನು ಬಂಧಿಸಿ ತನಿಖೆ ಮಾಡಲಾಗುತ್ತಿದೆ. ಅಲ್ಲದೇ, ಉಳಿದ ಐವರಲ್ಲಿ ಮೂವರು ಮಹಿಳೆಯರು ಕೂಡ ಇದ್ದಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಬರಲಿದೆ ಎಂದು ಎಸ್ಪಿ ಅಗರವಾಲ್ ಹೇಳಿದಿದ್ದಾರೆ.




Leave a Reply

Your email address will not be published. Required fields are marked *

error: Content is protected !!