ಚಿನ್ನದಾಸೆಗೆ ಬದುಕು ರೂಪಿಸಿದ ಮಾಲೀಕನ ಮಗನನ್ನೇ ಕೊಂದ

319

ಪ್ರಜಾಸ್ತ್ರ ಅಪರಾಧ ಸುದ್ದಿ

ಯಾದಗಿರಿ: ಹೊನ್ನು, ಹೆಣ್ಣು, ಮಣ್ಣಿಗಾಗಿ ಮನುಷ್ಯ ಯಾವಾಗ ಬದಲಾಗುತ್ತೆ ಎಂದು ಹೇಳುವುದೇ ಕಷ್ಟ. ಹೀಗಾಗಿ ನಂಬಿದವರೆ ಕುತ್ತಿಗೆ ಕೊಯ್ದು ಬಿಡ್ತಾರೆ. ಇಲ್ಲೊಬ್ಬ ಚಿನ್ನದಾಸೆಗೆ ಕೆಲಸ ಕೊಟ್ಟು ಮನೆಯಲ್ಲಿಟ್ಟುಕೊಂಡಿದ್ದ ಮಾಲೀಕನ ಮಗನನ್ನೆ ಹತ್ಯೆ ಮಾಡಿದ್ದಾನೆ.

ಯಾದಗಿರಿ ಜಿಲ್ಲೆ ಹುಣಸಗಿಯಲ್ಲಿ ಚಿನ್ನದ ಅಂಗಡಿ ಇಟ್ಟುಕೊಂಡಿದ್ದ ರಾಜಸ್ಥಾನ ಮೂಲದ ಜಗದೀಶ ಎಂಬುವರ ಮಗ ನರೇಂದ್ರನನ್ನ ಕೊಲೆ ಮಾಡಲಾಗಿದೆ. ಪದವಿ ಓದುತ್ತಿದ್ದ ನರೇಂದ್ರನ ಕೊಲೆ ಮಾಡಿದ್ದು ಮತ್ಯಾರೂ ಅಲ್ಲ, ಜಗದೀಶ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಕಿಶೋರ ಹಾಗೂ ಆತನ ಸ್ನೇಹಿತ.

ತನ್ನ ಅಂಗಡಿಯಲ್ಲಿ ಕೆಲಸಕ್ಕೆಂದು ಐದಾರು ವರ್ಷಗಳ ಹಿಂದೆಯೇ ರಾಜಸ್ಥಾನ ಮೂಲದ ಕಿಶೋರನನ್ನ ಕರೆದುಕೊಂಡು ಬಂದಿದ್ದ. ಇಷ್ಟು ವರ್ಷಗಳ ಕಾಲ ಚೆನ್ನಾಗಿಯೇ ಇದ್ದ ಕಿಶೋರ, ಚಿನ್ನದ ಆಸೆಗೆ ಬಿದ್ದು ಮನೆಯಲ್ಲಿರುವ ಚಿನ್ನ ಕಳ್ಳತನ ಮಾಡಲು ಹೋಗಿದ್ದಾನೆ. ಆಗ ಮನೆಯಲ್ಲಿ ಮಲಗಿದ್ದ ಕಿಶೋರನ್ನ ಹತ್ಯೆ ಮಾಡಿ ಕಿಡ್ನಾಪ್ ನಾಟಕವಾಡಿದ್ದ. ಇದೀಗ ಇವರಿಬ್ಬರನ್ನ ಹುಣಸಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!