ಅಂದರ್ ಬಾಹರ್ ಆಟ.. ಗುಮ್ಮಟ ನಗರಿಯಲ್ಲಿ ಗೆದ್ದವನ ಮರ್ಡರ್

308

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ದೀಪಾವಳಿ ಹಬ್ಬ ಬಂದ್ರೆ ಉತ್ತರ ಕರ್ನಾಟಕ ಭಾಗದಲ್ಲಿ ಮುಂಜಾನೆ ಒಂದು ರೀತಿಯ ಸಂಭ್ರಮ. ಪೂಜೆ ಸಮಯದಲ್ಲೊಂದು ರೀತಿಯ ಸಡಗರ. ಇದಾದ್ಮೇಲೆ ರಾತ್ರಿ ಪೂರ್ತಿ ನಡೆಯುವ ಅಂದರ್ ಬಾಹರ್ ಆಟದೊಂದು ಮಜಾ ಬೇರೆ.

ಇಸ್ಪೇಟ್ ಆಟದಿಂದ ಅನೇಕರ ಜೀವನ ಹಾಳಾಗಿದೆ. ಜೀವ ಸಹ ಹೋಗ್ತಿವೆ. ಇಂತಹದ್ದೆ ಒಂದು ಘಟನೆ ಗುಮ್ಮಟನಗರಿಯಲ್ಲಿ ನಡೆದಿದೆ. ಅಂದರ್ ಬಾಹರ್ ಆಟದಲ್ಲಿ ಗೆದ್ದವನ ಜೀವವನ್ನೇ ತೆಗೆದಿರುವ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ.

ತಿಪ್ಪಣ್ಣ ಗೊಂದಳಿ (36) ಅನ್ನೋ ವ್ಯಕ್ತಿಯನ್ನ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಇಸ್ಪೀಟ್ ಆಟದಲ್ಲಿ ಕೇವಲ ಸಾವಿರಾರು ರೂಪಾಯಿ ಗೆದ್ದಿರುವ ಕಾರಣಕ್ಕೆ, ಇದನ್ನ ಸಹಿಸದ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!