ಸಿಂದಗಿಯಲ್ಲಿ ಯುವಕನ ಮರ್ಡರ್

919

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಚಾಂದಕವಟೆ-ಬಂಥನಾಳ ರಸ್ತೆ ಮಧ್ಯೆ ಯುವಕನೊಬ್ಬನನ್ನ ಹತ್ಯೆ ಮಾಡಿರುವ ಘಟನೆ ನಡೆದಿದೆ. ಚಾಂದಕವಟೆ ಗ್ರಾಮದ 38 ವರ್ಷದ ಈರಣ್ಣ ಸುಭಾಷ ಧರಿಕಾರ ಕೊಲೆಯಾದ ದುರ್ದೈವಿಯಾಗಿದ್ದಾನೆ.

ಹಳೆ ದ್ವೇಷದ ಕಾರಣಕ್ಕೆ ಕೊಲೆ ನಡೆದಿರಬಹುದು ಎಂದು ಹೇಳಲಾಗ್ತಿದೆ. ಈ ಸಂಬಂಧ ಕೊಲೆಯಾದ ಈರಣ್ಣನ ತಂದೆ ಶುಭಾಷ ಧರಿಕಾರ ಎಂಬುವರು ಇಬ್ಬರು ಆರೋಪಿತರ ಮೇಲೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿಂಗಪ್ಪ ಶಿವಶಂಕರ ಚೌಧರಿ ಹಾಗೂ ರಮೇಶ ಬಸಪ್ಪ ಮೇತ್ರಿ ಅನ್ನೋ ಇಬ್ಬರ ಮೇಲೆ ದೂರು ನೀಡಲಾಗಿದೆ. ತಲೆಗೆ ಯಾವುದೋ ಆಯುಧದಿಂದ ಬಲವಾಗಿ ಹೊಡೆದು ಕೊಲೆ ಮಾಡಿ, ಚಾಂದಕವಟೆ-ಬಂಥನಾಳ ಗ್ರಾಮದ ನಡುವಿನ ರಸ್ತೆಯಲ್ಲಿ ತಂದು ಹಾಕಲಾಗಿದೆ ಎಂದು ಹೇಳಲಾಗ್ತಿದೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!