ಕಾಪಿ ಚೀಟಿ ಕೊಡಲು ಹೋದಾಗ ಹೂವಿನಹಿಪ್ಪರಗಿಯಲ್ಲಿ ಯುವಕ ಸಾವು: ಎಸ್ಪಿ ಹೇಳಿದ್ದೇನು?

420

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿಯಲ್ಲಿ 19 ವರ್ಷದ ಸಾಗರ ಚಲವಾದಿ ಅನ್ನೋ ಯುವಕ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಇಂದು ನಡೆದ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಕಾಪಿ ಚೀಟಿ ಕೊಡಲು ಹೋದಾಗ, ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಎಸ್ಪಿ ಅನುಪಮ ಅಗರವಾಲ್ ಮಾತ್ನಾಡಿದ್ದಾರೆ.

ಯುವಕನ ಸಾವಿನ ನಿಖರ ಕಾರಣಕ್ಕಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಯುವಕ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲಿತ್ತಿದ್ದ ಎನ್ನಲಾಗ್ತಿದೆ. ಘಟನೆ ವೇಲೆ ಗಾಬರಿಯಿಂದ ಬಿದ್ದಿದ್ದಾನೆ. ಪಿಎಂ ವರದಿ ಬಂದ ನಂತರ ಎಲ್ಲವೂ ತಿಳಿಯಲಿದೆ ಎಂದು ಎಸ್ಪಿ ಅನುಪಮ ಅಗರವಾಲ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!