14 ವರ್ಷ ಪೊಲೀಸರಿಗೆ ಸಿಗದವನು ತಂಗಿಗಾಗಿ ಶರಣಾದ ನಕ್ಸಲ್

351

ಪ್ರಜಾಸ್ತ್ರ ಸುದ್ದಿ

ದಂತೇವಾಡ: ತಂಗಿಗಾಗಿ ನಕ್ಸಲ್ ನೊಬ್ಬ ಪೊಲೀಸರಿಗೆ ಶರಣಾದ ಘಟನೆ ಛತ್ತೀಸಗಢದ ದಂತೇವಾಡದಲ್ಲಿ ನಡೆದಿದೆ. ಪಲ್ನಾರ್ ಗ್ರಾಮದ ಸುಮಾರು 26 ವರ್ಷದ ಮಲ್ಲಾ ಪೊಲೀಸರಿಗೆ ಶರಣಾಗಿದ್ದಾನೆ. ತಂಗಿಯ ಮಾತಿಗೆ ಬೆಲೆ ಕೊಟ್ಟು ರಕ್ಷಾ ಬಂಧನ ಹಬ್ಬದಂದೇ ಶರಣಾಗಿದ್ದಾನೆ.

ಮಲ್ಲಾ ಸುಮಾರು 12 ವರ್ಷದ ಹುಡುಗನಿರುವಾಗ್ಲೇ ಓಡಿ ಹೋಗಿ ನಕ್ಸಲೈಟ್ ಗುಂಪಿನೊಂದಿಗೆ ಸೇರಿಕೊಂಡಿದ್ದ. ಈತ ಕಳೆದ 14 ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಲ್ಲಾ ತಲೆಗೆ 8 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದೆಂದು ಘೋಷಿಸಲಾಗಿತ್ತು.

ಇಷ್ಟು ವರ್ಷಗಳ ಕಾಲ ಮನೆಗೆ ಬರದಿದ್ದ ಮಲ್ಲಾ, ಯಾರಿಗೂ ತಿಳಿಯದಂತೆ ಮನೆಗೆ ಬಂದಿದ್ದ. ರಕ್ಷಾ ಬಂಧನದ ಹಬ್ಬಕ್ಕೆ ನೀನು ನನ್ಗೆ ಏನೂ ಉಡುಗೊರೆ ಕೊಡುವುದು ಬೇಡ. ಪೊಲೀಸರ ಗುಂಡೇಟಿಗೆ ನೀನು ಬಲಿಯಾಗ್ತಿಯಾ. ಇದು ನನ್ಗೆ ಇಷ್ಟವಿಲ್ಲ. ಹೀಗಾಗಿ ನೀನು ಶರಣಾಗು. ಅದೆ ನನ್ಗೆ ಕೊಡುವ ಉಡಗೊರೆ ಎಂದಿದ್ದಾಳೆ. ತಂಗಿಯ ಪ್ರೀತಿಗೆ ಅಣ್ಣ ಶರಣಾಗಿದ್ದಾನೆ. ಈ ಬಗ್ಗೆ ಎಸ್ಪಿ ಅಭಿಷೇಕ ಪಲ್ಲವ್ ಖಚಿತ ಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!