ಚಿತ್ರಗಳನ್ನು ಬಹಿಷ್ಕರಿಸಬೇಡಿ: ಅಕ್ಷಯ್ ಕುಮಾರ್

361

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಚಿತ್ರಗಳಿಗೆ ಇದೀಗ ಬಹಿಷ್ಕಾರದ ಬಿಸಿ ತಟ್ಟುತ್ತಿದೆ. ಒಂದಾದ ಮೇಲೆ ಒಂದು ಚಿತ್ರಕ್ಕೆ ಬಲಪಂಥೀಯ ವಿಚಾರಗಳನ್ನು ಹೊಂದಿರುವವರು ಬಾಲಿವುಡ್ ಚಿತ್ರಗಳಿಗೆ ಬಹಿಷ್ಕಾರದ ಬಿಸಿ ತಟ್ಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಅಕ್ಷಯ್ ಕುಮಾರ್, ಚಿತ್ರಗಳನ್ನು ಬ್ಯಾನ್ ಮಾಡಬೇಡಿ. ಇದರಿಂದ ದೇಶಕ್ಕೆ ನಷ್ಟವೆಂದು ಹೇಳಿದ್ದಾರೆ.

ಆಗಸ್ಟ್ 11ರಂದು ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಚಿತ್ರ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೂ ಬಹಿಷ್ಕಾರದ ಬಿಸಿ ತಟ್ಟುತ್ತಿದೆ. ಹಿಂದೂ ವಿರೋಧಿ ಚಿತ್ರಗಳನ್ನು ಬಹಿಷ್ಕರಿಸಿ ಅನ್ನೋ ಟ್ರೆಂಡ್ ಟ್ವೀಟ್ಟರ್ ಸೇರಿ ಸೋಷಿಯಲ್ ಮೀಡಿಯಾದಲ್ಲಿ ನಡೆದಿದೆ. ಈ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ದೇಶದ ಆರ್ಥಿಕತೆಯನ್ನು ತಡೆಯುವುದು ಸರಿಯಲ್ಲ. ನೀವು ಹೇಳುತ್ತಿರುವುದು ತಪ್ಪು. ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇದು ಒಳ್ಳೆಯ ಸಂಕೇತವಲ್ಲ. ಸಿನಿಮಾ ಬಹಿಷ್ಕಾರದ ವಿಚಾರ ಹರಡಬೇಡಿ ಎಂದಿದ್ದಾರೆ.

ನಟ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ, ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಬಹಿಷ್ಕಾರದ ಅಭಿಯಾನದಂತೆ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಕ್ಕೂ ಬಹಿಷ್ಕಾರ ಅಭಿಯಾನ ನಡೆದಿದೆ. ಈ ಹಿಂದೆ ರಿಲೀಸ್ ಆದ ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್ ಚಿತ್ರಗಳು ಪ್ಲಾಫ್ ಆಗಿದ್ದು, ಅಕ್ಷಯ್ ಕುಮಾರ್ ಗೆ ಮತ್ತೊಂದು ತಲೆನೋವು ಶುರುವಾಗಿದೆ. ಒಂದ್ಕಡೆ ಸೌಥ್ ಸಿನಿಮಾಗಳು ಬ್ಲಾಕ್ ಬ್ಲಸ್ಟರ್ ಆಗುತ್ತಿದ್ದರೆ ಬಿ ಟೌನ್ ಸಿನಿಮಾಗಳು ಮಕಾಡೆ ಮಲಗುತ್ತಿವೆ. ಹೀಗಿರುವಾಗ ಬಹಿಷ್ಕಾರ ಇಡೀ ಬಾಲಿವುಡ್ ದುನಿಯಾಗೆ ಸಂಕಷ್ಟ ತಂದೊಡ್ಡಿದೆ.




Leave a Reply

Your email address will not be published. Required fields are marked *

error: Content is protected !!