ಪ್ರಜಾಸ್ತ್ರ ಸುದ್ದಿ
ವಿಜಯಪುರ: ಇನ್ನೇನು ರಕ್ಷಾ ಬಂಧನ ಸಮೀಪಿಸಿದೆ. ಶುಕ್ರವಾರ ಎಲ್ಲೆಡೆ ನೂಲು ಹುಣ್ಣಿಮೆ ಆಚರಿಸಲಾಗುತ್ತೆ. ನೂಲು ಹಣ್ಣಿಮೆ ಪ್ರಯುಕ್ತ ಸಹೋದರಿಯರು ಸಹೋದರನಿಗೆ ರಾಖಿಯನ್ನು ಕಟ್ಟುವುದು ಸಂಪ್ರದಾಯ. ಹೀಗಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ರಾರಾಜಿಸುತ್ತಿವೆ.
ಜಿಲ್ಲೆಯ ಎಲ್ಲಡೆ ಸ್ಟೇಷನರಿ ಅಂಗಡಿಗಳಲ್ಲಿ ಹತ್ತು ಹಲವು ಬಗೆಯ ರಾಖಿಗಳು ಬಂದಿವೆ. 20 ರೂಪಾಯಿಂದ 200, 300 ರೂಪಾಯಿ ತನಕ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಜನರು ತಮಗೆ ಇಷ್ಟವಾದ ರಾಖಿಗಳನ್ನು ಖರೀದಿಸುವಲ್ಲಿ ತೊಡಗಿಕೊಂಡಿದ್ದಾರೆ.