ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಇತ್ತೀಚೆಗೆ ಮದುವೆಯಾಗಿರುವ ಸ್ಟಾರ್ ಜೋಡಿಯಾಗಿರುವ ನಟಿ ನಯನತಾರಾ ಹಾಗೂ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಮಾಡಿಕೊಂಡ ಯಡವಟ್ಟಿನಿಂದ ಮದುವೆಯಾದ ಮೂರು ದಿನದಲ್ಲೇ ಕ್ಷಮೆ ಕೇಳುವ ಪರಿಸ್ಥಿತಿ ಬಂದಿದೆ.
ಮದುವೆಯಾದ ಬಳಿಕ ನವ ದಂಪತಿ ಸೀದಾ ತಿರುಪತಿ ತಿಮ್ಮನ ಸನ್ನಿದಾನಕ್ಕೆ ಆಗಮಿಸಿತ್ತು. ಈ ವೇಳೆ ದೇವಸ್ಥಾನದ ಆವರಣದಲ್ಲಿ ಚಪ್ಪಲಿಗಳನ್ನು ಧರಿಸಿರುವುದು ಕಂಡು ಬಂದಿತ್ತು. ಇದು ವಿವಾದ ಪಡೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ಬಗ್ಗೆ ಕ್ಷಮೆ ಕೇಳಿದ ದಂಪತಿ, ನಾನು ತಿರುಪತಿ ತಿಮ್ಮಪ್ಪನ ಭಕ್ತರು. ಮದುವೆಯನ್ನು ಸಹ ಇಲ್ಲೇ ಆಗಬೇಕು ಎಂದುಕೊಂಡಿದ್ದೇವು. ಆದರೆ, ಕೆಲ ಕಾರಣಗಳಿಂದ ಚೆನ್ನೈನಲ್ಲಿ ಮಾಡಿಕೊಂಡೆವು. ನಂತರ ಮನೆಗೆ ಹೋಗದೆ ಸೀದಾ ತಿರುಪತಿಗೆ ಬಂದು ದರ್ಶನ ಪಡೆದಿದ್ದೇವೆ. ಫೋಟೋ ತೆಗೆಸಿಕೊಳ್ಳುವ ಸಂದರ್ಭದಲ್ಲಿ ಆವರಣದಲ್ಲಿ ಚಪ್ಪಲಿ ಹಾಕಿಕೊಂಡಿರುವುದು ನಮ್ಮ ಅರಿವಿಗೆ ಬಾರದೆ ಇರೋದಕ್ಕೆ ಕ್ಷಮೆ ಕೇಳುತ್ತೇವೆ ಎಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ.