ಪ್ರಜಾಸ್ತ್ರ ಸಿನಿಮಾ ಡೆಸ್ಕ್
ತೆಲುಗು, ತಮಿಳು ಚಿತ್ರರಂಗದ ಸ್ಟಾರ್ ನಟಿ, ಕನ್ನಡ ಮೂಲದ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸ್ಕೆಚ್ ಹಾಕಲಾಗಿದೆಯಂತೆ. ಅನುಷ್ಕಾ ಸಹೋದರ, ಜಯ ಸಂಘಟನೆಯ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಲಾಗಿದೆಯಂತೆ. ಈ ಸಂಬಂಧ ಗೃಹ ಸಚಿವರಿಗೆ ದೂರು ಸಲ್ಲಿಸಲಾಗಿದೆ.
ದಿವಂಗತ ಮುತ್ತಪ್ಪ ರೈ ಸ್ಥಾಪಿಸಿದ ಜಯ ಕರ್ನಾಟಕ ಸಂಘಟನೆಯಲ್ಲಿ ಗುಣರಂಜನ್ ಗುರುತಿಸಿಕೊಂಡಿದ್ದಾರೆ. ಇದೇ ತಂಡದಲ್ಲಿ ಇದೀಗ ಜಿದ್ದು ಶುರುವಾಗಿದ್ದು, ಆಪ್ತರಲ್ಲೇ ಸಂಚು ರೂಪಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.