ಪ್ರಜಾಸ್ತ್ರ ಸುದ್ದಿ
ಮೈಸೂರು: ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರ ಆಯ್ಕೆ ಹಿಂದೆ ಯಾವ ಸಾಮಾಜಿಕ ನ್ಯಾಯ ಇಲ್ಲ. ವಿಶೇಷತೆಯೂ ಇಲ್ಲ. ಆ ರೀತಿ ಇದ್ದರೆ ಆರ್ ಎಸ್ಎಸ್ ಸರಸಂಘ ಚಾಲಕರಾಗಿ ಆಯ್ಕೆ ಮಾಡಲಿ. ಯಾಕಂದರೆ ಅವರು ಬಿಜೆಪಿಯವರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರಿಗೆ ಮುರ್ಮು ಕೆಲಸ ಮಾಡಿದ್ದಾರೆ. ಅವರನ್ನು ಆರ್ ಎಸ್ಎಸ್ ಉನ್ನತ ಸ್ಥಾನಕ್ಕೆ ಆಯ್ಕೆ ಮಾಡಲಿ. ಮೋಹನ್ ಭಾಗವತ್ ಸ್ಥಾನಕ್ಕೆ ದ್ರೌಪದಿ ಮುರ್ಮು ಅವರಂತಹ ಮಹಿಳೆಯರನ್ನು ತರಲಿ ಎಂದಿದ್ದಾರೆ. ಕೋವಿಂದ್ ಅವರಂತೆ ಇವರು ನಾಮಕವಾಸ್ಥೆ. ರಾಜೇಂದ್ರ ಪ್ರಸಾದ್ ಅವರಂತೆ ಕೆಲಸ ಮಾಡಲು ಬಿಡುವುದಿಲ್ಲವೆಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.