ಬಬಲೇಶ್ವರದಲ್ಲಿ ಗಾಂಜಾ ಜಪ್ತಿ: ಇಬ್ಬರ ಬಂಧನ

305

ಪ್ರಜಾಸ್ತ್ರ ಸುದ್ದಿ

ಬಬಲೇಶ್ವರ: ವಿಜಯಪುರ ಜಿಲ್ಲೆ ಬಬಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಕಾರಜೋಳ ಗ್ರಾಮದ ಜಮೀನುವೊಂದರಲ್ಲಿ ಬೆಳೆದಿದ್ದ ಗಾಂಜಾವನ್ನ ಜಪ್ತಿ ಮಾಡಲಾಗಿದೆ. 18.80 ಕೆಜಿ ಗಾಂಜಾವನ್ನ ಜಪ್ತಿ ಮಾಡಲಾಗಿದೆ. ಈ ಸಂಬಂಧ ಇಬ್ಬರನ್ನ ಬಂಧಿಸಲಾಗಿದೆ.

31 ವರ್ಷದ ಚಂದ್ರಶೇಕರ ಹಳಿಜೋಳ ಹಾಗೂ 21 ವರ್ಷದ ಮುತ್ತಪ್ಪ ಹಳಿಜೋಳ ಎಂಬುವರನ್ನ ಬಂಧಿಸಲಾಗಿದೆ. ವಿಜಯಪುರ ಗ್ರಾಮೀಣ ಸಿಪಿಐ ಎಂ.ಕೆ ದ್ಯಾಮಣ್ಣವರ, ಬಬಲೇಶ್ವರ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಗಾಂಜಾ ಸಮೇತ ಆರೋಪಿಗಳನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!