ಬೆಂಗಳೂರು: ಇಂದು ಗಾಂಧಿ ಜಯಂತಿ ಅಂಗವಾಗಿ ಬಿಬಿಎಂಪಿ ವತಿಯಿಂದ ಸ್ವಚ್ಛತಾ ಅಭಿಯಾನ ಹಾಗೂ ಫ್ಲಾಗ್ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದ್ರೆ, ನೂತನ ಮೇಯರ್ ಗೌತಮಕುಮಾರ ಅವರು, ಮೊದಲ ಕಾರ್ಯಕ್ರಮಕ್ಕೆ ಗೈರು ಹಾಜರಿಯಾಗಿದ್ದಾರೆ.
ನಗರದ ಜಯರಾಮ ಕಾಲೋನಿ, ಹೆಚ್ ಎಂಟಿ ಮುಖ್ಯ ರಸ್ತೆ ಹಾಗೂ ಮತ್ತಿಕೆರೆ ವಾರ್ಡ್ ನಲ್ಲಿ ಬಿಬಿಎಂಪಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕೆ ಡಿಸಿಎಂ ಅಶ್ವಥನಾರಾಯಣ ಚಾಲನೆ ನೀಡಿದ್ದಾರೆ. ಆದ್ರೆ, ಈ ವೇಳೆ ನೂತನ ಮೇಯರ್ ಗೌತಮಕುಮಾರ ಗೈರಾಗುವ ಮೂಲಕ ಮೊದಲ ದಿನದಿಂದಲೇ ಯಡವಟ್ಟು ಮಾಡಿಕೊಂಡಿದ್ದಾರೆ.