ಹುಡ್ಗರ ‘ಆನೆಬಲ’ ಪ್ರದರ್ಶನಕ್ಕೆ ಸಿದ್ಧತೆ

331

ಚಂದನವನದಲ್ಲಿ ಪ್ರತಿವಾರ ಒಂದಲ್ಲ ಒಂದು ಹೊಸ ತಂಡದ ಸಿನಿಮಾ ರಿಲೀಸ್ ಆಗುತ್ತಲೇ ಇರುತ್ತೆ. ಒಂದಿಷ್ಟು ಮ್ಯಾಜಿಕ್ ಮಾಡುತ್ತವೆ. ಆ ಸಾಲಿಗೆ ಆನೆಬಲ ಸಿನ್ಮಾ ಸೇರಿಕೊಳ್ತಿದೆ. ಜನತಾ ಟಾಕೀಸ್ ನ ಫಸ್ಟ್ ಮೂವಿ ಇದಾಗಿದೆ.

ಸಂಪೂರ್ಣವಾಗಿ ಹಳ್ಳಿ ಸೊಗಡಿನ ಕಥೆಯನ್ನ ಹೊಂದಿರುವ ಚಿತ್ರದಲ್ಲಿ ನೂರಕ್ಕೂ ಹೆಚ್ಚು ಕಲಾವಿದರಿದ್ದು ನ್ಯಾಚುರಲ್ ಡೈಲಾಗ್ ನಿಂದ ನೋಡುಗರನ್ನ ಸೆಳೆಯುತ್ತೆ. ಅಲ್ದೇ, ಪ್ರತಿ ಕಲಾವಿದರು ಸ್ವತಃ ತಾವೇ ಧ್ವನಿ ನೀಡಿದ್ದಾರೆ. ಬೇರೆಯವರಿಂದ ವಾಯ್ಸ್ ಡಬ್ ಮಾಡಿಸದೆ, ಅವರಿಂದಲ್ಲೇ ಡೈಲಾಗ್ ಹೇಳಿಸಲಾಗಿದೆ. 100ಕ್ಕೂ ಹೆಚ್ಚು ವಯಸ್ಸಿನ ಅಜ್ಜಿ ಸಹ ತಮ್ಮ ಪಾತ್ರಕ್ಕೆ ತಾವೇ ಧ್ವನಿ ನೀಡಿದ್ದಾರೆ.

ಸೊನಗಹಳ್ಳಿ ರಾಜು ನಿರ್ದೇಶನ ಮಾಡಿರುವ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ.ವಿ ನಾಗೇಂದ್ರ ಪ್ರಸಾದ, ಸೊನಗಹಳ್ಳಿ ರಾಜು, ಯೋಗರಾಜ ಭಟ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಮಂಡ್ಯ ಭಾಷೆಯಲ್ಲಿರುವ ಹಾಡುಗಳು ಈಗಾಗ್ಲೇ ಹಿಟ್ ಆಗಿವೆ. ಎ.ವಿ ವೇಣುಗೋಪಾಲ ಅಡಕಮಾರನಹಳ್ಳಿ ಬಂಡಾವಳ ಹೂಡಿದ್ದಾರೆ. ಹೊಸಬರ ಪ್ರಯತ್ನ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!