ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ ಹತ್ಯೆಗೆ ಸಂಬಂಧಿಸಿದಂತೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಇದೀಗ ಹೊರ ಬರ್ತಿವೆ. ಈ ಕೇಸಿನಲ್ಲಿ ಮತ್ತೊಬ್ಬ ಆರೋಪಿಯನ್ನ ಜಾರ್ಖಂಡ್ ನಲ್ಲಿ ಬಂಧಿಸಲಾಗಿದೆ. ರಿಷಿಕೇಶ ದೇವಾಡಿಕರ್ ಅಲಿಯಾಸ್ ಮುರುಳಿ ಬಂಧಿತ ಆರೋಪಿಯಾಗಿದ್ದಾನೆ.
ಗೌರಿ ಲಂಕೇಶ ಹತ್ಯೆಗೆ ಬಳಸಿದ್ದ ಪಿಸ್ತೂಲ್ ನ್ನ ಈತ ನಾಶಗೊಳಿಸಿದ್ದ ಅಂತಾ ಹೇಳಲಾಗ್ತಿದೆ. ಎಸ್ಐಟಿ ತಂಡ ಆರೋಪಿಗೆ ಬಲೆ ಬೀಸಿತ್ತು. ಇದೀಗ ಸಿಕ್ಕಿಬಿದ್ದಿದ್ದಾನೆ. ಈ ಪ್ರಕರಣದಲ್ಲಿ 18ನೇ ಆರೋಪಿಯಾಗಿದ್ದಾನೆ. ಸ್ಥಳೀಯ ಕೋರ್ಟ್ ಗೆ ಹಾಜರು ಪಡಿಸಿದ್ಮೇಲೆ ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತೆ.
ಗೌರಿ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳು ಕೋಡ್ ವರ್ಡ್ ನಲ್ಲಿ ಮಾತ್ನಾಡ್ತಿದ್ದರಂತೆ. ಸಾಹಿತ್ಯ, ಪಿಸ್ತೂಲ್ ಲಡ್ಡು ಅಂತೆಲ್ಲ ಕೋಡ್ ನಲ್ಲಿ ಮಾತ್ನಾಡ್ತಿದ್ದರಂತೆ. ಹೇಗೆ ಹತ್ಯೆ ಮಾಡಬೇಕು. ಎಲ್ಲಿ, ಯಾವ ರೀತಿ ಅನ್ನೋದು ಸಹ ಕೋಡ್ ವರ್ಡ್ ನಲ್ಲಿ ಮಾತ್ನಾಡ್ತಿದ್ರು ಅನ್ನೋದು ತಿಳಿದು ಬಂದಿದೆ.