ಬೆಂಗಳೂರು: ಸಪ್ತಪದಿ ಸಾಮೂಹಿಕ ವಿವಾಹ ಯೋಜನೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಲಾಂಛನ ಹಾಗೂ ಕರಪತ್ರವನ್ನ ಸಿಎಂ ಬಿಡುಗಡೆ ಮಾಡಿದ್ರು.
ಸಪ್ತಪದಿ ಯೋಜನೆಯಡಿ ಮದುವೆಯಾದ ಜೋಡಿಗೆ 55 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಈ ಬಗ್ಗೆ ಮಾತ್ನಾಡಿದ ಸಿಎಂ, ಮುಜರಾಯಿ ಇಲಾಖೆಯ ಎ ದರ್ಜೆಯ 100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ಮಾಡಲಾಗುವುದು ಅಂತಾ ತಿಳಿಸಿದ್ರು. ದೇವಾಲಯದ ನಿಧಿಯಲ್ಲಿಯೇ ಮದುವೆ ಕಾರ್ಯ ಮಾಡಲಾಗುವುದು. ದಂಪತಿಗೆ 55 ಸಾವಿರ ರೂಪಾಯಿ ನೀಡಲು ನಿರ್ಧರಿಸಲಾಗಿದೆ ಅಂತಾ ಹೇಳಿದ್ರು.
ಏಪ್ರಿಲ್ 26ಕ್ಕೆ ಮೊದಲ ಹಂತದ ಸಾಮೂಹಿಕ ವಿವಾಹ ನಡೆಯಲಿದೆ. ಮೇ 24ರಂದು ಎರಡನೇ ಹಂತದ ವಿವಾಹ. 8 ಗ್ರಾಮ ತೂಕದ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಹಾಗೂ 40 ಸಾವಿರ ರೂಪಾಯಿ ನೀಡಲಾಗುವುದು. ವಧುಗೆ 10 ಸಾವಿರ ರೂಪಾಯಿ ಹಾಗೂ ವರನಿಗೆ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಲಾಗುವುದು. ಈ ವೇಳೆ ಮುಜರಾಯಿ ಇಲಾಖೆ ಸಚಿವ ಕೋಟೆ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ರು.