ಕರೋನಾ ರಾತ್ರಿ ಹರಡುತ್ತೆ ಅಂದ ವಿಜ್ಞಾನಿ ಫೋಟೋ ಕೊಡಿ

208

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಲೋಕಸಭೆ ಉಪ ಚುನಾವಣೆ ಪ್ರಚಾರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಇಂದಿನಿಂದ 10 ಜಾರಿ ಮಾಡಿರುವ ನೈಟ್ ಕರ್ಫ್ಯೂ ಬಗ್ಗೆ ವ್ಯಂಗ್ಯವಾಡಿದ್ದಾರೆ. ರಾತ್ರಿ ಮಾತ್ರ ಕರೋನಾ ಹರಡುತ್ತೆ ಎಂದು ವಿಜ್ಞಾನಿಯ ಫೋಟೋ ಕೊಡಿ ಎಂದಿದ್ದಾರೆ.

ಇನ್ನು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾತ್ನಾಡಿದ ಅವರು, ಸರ್ಕಾರ ರೈತ ಹಾಗೂ ಕಾರ್ಮಿಕ ಮುಖಂಡರ ಜೊತೆ ಚರ್ಚಿಸಬೇಕು. ಇಲ್ಲವೆ ಅವರಿಗೆ ಚರ್ಚಿಸಲು ಅವಕಾಶ ಕೊಡಬೇಕು. ಅದನ್ನು ಬಿಟ್ಟು ಪೊಲೀಸರನ್ನು ಬಳಸಿಕೊಂಡು ಹೋರಾಟ ಮಟ್ಟ ಹಾಕುವುದು ಎಷ್ಟು ಸರಿ ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.

ಸವದಿ ಸಾರಿಗೆ ಮಂತ್ರಿ ಆದಾಗಿನಿಂದ ಎಲ್ಲ ನಿರ್ಧಾರಗಳು ತಪ್ಪಾಗಿವೆ. ಸರ್ಕಾರದ ವಿರುದ್ಧ ನೌಕರರೆ ತಿರುಗಿ ಬಿದ್ದಿದ್ದಾರೆ. ಮೊದಲು ಅವರಿಗೆ ಸಂಬಳ ಕೊಡಿ ಎಂದು ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!