ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಜನವರಿ 26ರಂದು ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲು ನಿರ್ಧರಿಸಿದ್ದಾರೆ. ಅದೆ ರೀತಿ ಬೆಂಗಳೂರಿನಲ್ಲಿ ಸಹ ಪರೇಡ್ ನಡೆಸಲು ರೈತ ಸಂಘಟನೆಗಳು ಮುಂದಾಗಿವೆ. ಆದ್ರೆ, ಇದಕ್ಕೆ ಅನುಮತಿ ಇಲ್ಲ. ಗಣರಾಜ್ಯೋತ್ಸವ ಆಚರಣೆಗೆ ಮನವಿ ಮಾಡಲಾಗಿದೆ. ಟ್ರ್ಯಾಕ್ಟರ್ ರ್ಯಾಲಿ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲವೆಂದು ನಗರ ಪೊಲೀಸ್ ಆಯುಕ್ತ ಕಮಲ ಪಂಥ್ ಹೇಳಿದ್ದಾರೆ.
ಬೆಂಗಳೂರಿಗೆ ಜೀಪ್, ಕಾರ್ ಸೇರಿ ಇತರೆ ವಾಹನಗಳಲ್ಲಿ ಬರುವವರಿಗೆ ಅವಕಾಶವಿದೆ. ಆದ್ರೆ, ಟ್ರ್ಯಾಕ್ಟರ್ ನಲ್ಲಿ ಬರುವವರಿಗೆ ಇಲ್ಲ. ಸಾಂಕೇತಿವಾಗಿ ಬರುವವರಿಗೂ ಅವಕಾಶ ನೀಡುವುದಿಲ್ಲವೆಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಆದ್ರೆ, ರೈತ ಸಂಘಟನೆ ಮುಖಂಡರು ಟ್ರ್ಯಾಕ್ಟರ್ ಪರೇಡ್ ನ್ನ ರಾಜಧಾನಿಯಲ್ಲಿ ಮಾಡುತ್ತೇವೆ ಅಂತಿದ್ದಾರೆ.