ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೋವಿಡ್ 19 ಅನ್ ಲಾಕ್ 3 ಪ್ರಕ್ರಿಯಯಲ್ಲಿ ಯಾವುದೇ ರಾಜ್ಯ ಸರ್ಕಾರ ಜಿಲ್ಲೆ ಹಾಗೂ ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರಬಾರದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಇದ್ರಿಂದ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತೆ ಎಂದು ತಿಳಿಸಿದೆ.
ಅನ್ ಲಾಕ್ ಮಾರ್ಗಸೂಚಿ 3.0 ಪ್ರಕಾರ ಜನರು ಹಾಗೂ ಸರಕು ಸಾಗಾಣಿಕೆ ವಾಹನಗಳಿಗೆ ರಾಜ್ಯ ವಾಪ್ತಿಯಲ್ಲಿ ಹಾಗೂ ಅಂತರರಾಜ್ಯದಲ್ಲಿಯೂ ನಿರ್ಬಂಧ ಹೇರಬಾರದು ಎಂದಿದೆ. ಅಂತರ ಜಿಲ್ಲೆ, ರಾಜ್ಯ ಸಂಚಾರಕ್ಕೆ ಪ್ರತ್ಯೇಕ ಅನುಮತಿ ಪಡೆಯುವ ಅಗತ್ಯವಿಲ್ಲವೆಂದು ತಿಳಿಸಿದೆ. ಅನ್ ಲಾಕ್ 3.0 ಆಗಸ್ಟ್ 30ಕ್ಕೆ ಕೊನೆಯಾಗಲಿದೆ.