ನವೆಂಬರ್ 1 ಶುಕ್ರವಾರ ಸ್ಯಾಂಡಲ್ ವುಡ್ ಅಂಗಳದಲ್ಲಿ ಮೂರು ವಿಶೇಷತೆಗಳಿವೆ. ಹೀಗಾಗಿ ಸ್ಟಾರ್ ನಟರ ಅಭಿಮಾನಿಗಳಿಗೆ ಫುಲ್ ಖುಷಿಯಾಗಲಿದೆ. ಅದೇನಪ್ಪ ಅಂದ್ರೆ, ನಟ ಶಿವಣ್ಣ ಅಭಿನಯದ ಆಯುಷ್ಮಾನ್ ಭವ ಸಿನ್ಮಾ ರಿಲೀಸ್ ಆಗ್ತಿದೆ. ಈ ಸಿನ್ಮಾ ದ್ವಾರಕೀಶ ನಿರ್ಮಾಣ ಸಂಸ್ಥೆಗೆ 50 ವರ್ಷ ತುಂಬಿದ ಟೈಂನಲ್ಲಿ ಬರ್ತಿರುವ ಸಸ್ಪೆನ್ಸ್ ಹಾರರ್ ಮೂವಿ.
ಇನ್ನೊಂದು ಚಾಲೆಂಜಿಂಗ್ ಸ್ಟಾರ್ ದರ್ಶನ ನಟನೆಯ ಒಡೆಯ ಚಿತ್ರದ ಟ್ರೇಲರ್ ರಿಲೀಸ್ ಆಗ್ತಿದೆ. ಡಿ ಬಾಸ್ ಅಭಿಮಾನಿಗಳಿಗೆ ಈ ಬಾರಿಯ ನಂಬರ್ 1 ಕನ್ನಡ ರಾಜ್ಯೋತ್ಸವ ಸ್ಪೆಷಲ್ ಆಗಿರುತ್ತೆ. ಇದರ ಜೊತೆಗೆ ಈಗಾಗ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ, ಗೋವಾ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವ ರಂಗನಾಯಕಿ ಸಿನ್ಮಾ ಬಿಡುಗಡೆಯಾಗ್ತಿದೆ.
ಮಹಿಳಾ ಪ್ರಧಾನ ಕಥೆಯಿಂದ ಕುತೂಹಲ ಮೂಡಿಸಿರುವ ಚಿತ್ರದ ಟ್ರೇಲರ್ ನೋಡಿದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಅದಿತಿ ಪ್ರಭುದೇವ ಮೇನ್ ರೋಲ್ ಮಾಡಿದ್ದಾರೆ. ಈ ಕಾರಣಗಳಿಗೆ ಚಂದನವನದಲ್ಲಿ ತ್ರಿಬಲ್ ಧಮಾಕ್ ಅಂತಾ ಹೇಳಲಾಗ್ತಿದೆ.