ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಚಿಕ್ಕರೂಗಿ ಗ್ರಾಮದ ಸುಭಾಸ ಬನಸುಡೆ ಎಂಬುವರ ಹೊಲದಲ್ಲಿನ ಸುಮಾರು 40 ಅಡಿ ಆಳದ ಬಾವಿಯಲ್ಲಿ ನವಿಲೊಂದು ಬಿದ್ದಿತ್ತು. ಅದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಬಾವಿಗೆ ಬಿದ್ದ ನವಿಲು ಮೇಲೆ ಬರಲಾಗಿದೆ ಅಲ್ಲೆ ಸಿಲುಕಿಕೊಂಡಿದೆ. ಇದನ್ನು ತಿಳಿದ ಹೊಲದವರು ಅಗ್ನಿಶಾಮಕದವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ನವಿಲು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಈ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ಶಾಂತಪ್ಪ ಬಿರಾದಾರ, ಸುರೇಶ್ ವೇದಪಾಠಕ್, ಸಿದ್ದರಾಯ ಪಾರ್ಥನಳ್ಳಿ, ಕಲ್ಯಾಣಕುಮಾರ ಭಜಂತ್ರಿ ಹಾಗೂ ಶರಣಬಸು ಬಾಗೇವಾಡಿ ಭಾಗವಹಿಸಿದ್ದರು.