ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಇವುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಯ ಕರ್ನಾಟಕ ವತಿಯಿಂದ, ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಸಾಕಷ್ಟು ಅಶಾಂತಿ ಸೃಷ್ಟಿಯಾಗುತ್ತಿದೆ. ಹೀಗಾಗಿ ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅಬಕಾರಿ ಇನ್ಸ್ ಪೆಕ್ಟರ್ ಆರತಿ ಖೈನೂರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚನ್ನಪ್ಪಗೌಡ ಬಿರಾದಾರ, ತಾಲ್ಲೂಕಾಧ್ಯಕ್ಷ ಸಂತೋಷ ಮನಗೂಳಿ, ತಾಕೂಕು ಪ್ರಧಾನ ಕಾರ್ಯದರ್ಶಿ ಶರಣು ಮನಗೂಳಿ, ಉಪಾಧ್ಯಕ್ಷ ಮಂಜುನಾಥ ಪತ್ತಾರ, ಮುನ್ನಾ ಮುಜಾವರ, ಕಾರ್ಯಧಕ್ಷ ಭೀಮಣ್ಣ ಯಳಮೇಳಿ, ಎಸ್ಸಿ, ಎಸ್ಟಿ ತಾಲೂಕಾಧ್ಯಕ್ಷ ರಮೇಶ ರಾಠೋಡ, ತಾಲೂಕು ಸಂಚಾಲಕ ಭಾಗಣ್ಣ ತಮದೋಡ್ಡಿ, ಮಾಡಬಾಳ ಗ್ರಾಮ ಘಟಕ ಅಧ್ಯಕ್ಷ ಸಿದ್ದು ಅಂಬಲೂರ, ಹೊನ್ನಳ್ಳಿ ಗ್ರಾಮ ಘಟಕ ಅಧ್ಯಕ್ಷ ಗುರು ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಶರಣು ಗದ್ದಿಗಿಮಠ ಉಪಸ್ಥಿತರಿದ್ದರು.