‘ರಾವಣ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 59, ರಾಮ ರಾಜ್ಯದಲ್ಲಿ 100 ರೂಪಾಯಿ’

300

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶ್ಯಾದ್ಯಂತ ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿದ ಪರಿಣಾಮ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಸಲಾಯ್ತು. 100 ನಾಟೌಟ್ ಹೆಸರಿನ ಮೂಲಕ ರಾಜ್ಯದ ತುಂಬಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ದಿನೇಶ ಗುಂಡೂರಾವ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿ ಪ್ರತಿಭಟನೆ ನಡೆಸಿದ್ರು.

ಈ ವೇಳೆ ಮಾತ್ನಾಡಿದ ಸಿದ್ದರಾಮಯ್ಯ, ರಾವಣ ರಾಜ್ಯದಲ್ಲಿ(ಶ್ರೀಲಂಕಾ) ಪೆಟ್ರೋಲ್ ಬೆಲೆ 59 ರೂಪಾಯಿ ಇದೆ. ರಾಮ ರಾಜ್ಯದಲ್ಲಿ 100 ಆಗಿದೆ ಎಂದು ಕಿಡಿ ಕಾರಿದ್ರು. ರಾಮನ ಹೆಸರು ಹೇಳ್ತೀರಾ, ಜನರ ಕಷ್ಟ ಅರ್ಥ ಆಗಲ್ಲಿವೇ ಎಂದು ಕಿಡಿ ಕಾರಿದ್ರು. ದೇಶ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಜಿಲ್ಲಾ ಕೇಂದ್ರಗಳಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದು, ಜನರು ಸಹ ಧ್ವನಿ ಎತ್ತಬೇಕು ಎಂದರು.

ಡಿ.ಕೆ ಶಿವಕುಮಾರ ಮಾತ್ನಾಡಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ಬರೆ ಎಳೆದಿದೆ. ಅಲ್ದೇ, ಎಲ್ಲ ಪದಾರ್ಥಗಳ ಬೆಲೆ ಏರಿಕೆ ಮಾಡಲಾಗಿದೆ. ಜನರ ಬದುಕನ್ನ ಬದಲಾವಣೆ ಮಾಡಬೇಕಾದ ಸರ್ಕಾರ ಪಿಕ್ ಪಾಕೇಟ್ ಮಾಡ್ತಿದೆ ಅಂತಾ ವಾಗ್ದಾಳಿ ನಡೆಸಿದ್ರು.




Leave a Reply

Your email address will not be published. Required fields are marked *

error: Content is protected !!