ನವದೆಹಲಿ: ಸರ್ಕಾರಿ ನೌಕರನ ಮೇಲೆ ಕ್ರಿಕೆಟ್ ಬ್ಯಾಟಿನಿಂದ ಹಲ್ಲೆ ಮಾಡಿದ್ದ ಬಿಜೆಪಿ ಶಾಸಕ ಆಕಾಶ ವಿಜಯವರ್ಗೀಯ ವಿರುದ್ಧ ಪ್ರಧಾನಿ ಮೋದಿ ಕಿಡಿ ಕಾರಿದ್ದಾರೆ. ಆಕಾಶ ವಿಜಯವರ್ಗೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ ವಿಜಯವರ್ಗೀಯ ಪುತ್ರನಾಗಿದ್ದಾನೆ.
ಹಲ್ಲೆ ಘಟನೆಯನ್ನ ಖಂಡಿಸಿರುವ ಪ್ರಧಾನಿ ಮೋದಿ ಅವರು, ಯಾರ ಮಗನಾದರೇನು? ಗೂಂಡಾ ವರ್ತನೆಯನ್ನ ನಾವು ಸಹಿಸುವುದಿಲ್ಲ ಅಂತಾ ಹೇಳಿದ್ದಾರೆ. ಅಲ್ದೇ, ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವವರು ಪಕ್ಷದಲ್ಲಿ ಮುಂದುವರೆಯಲು ಅನರ್ಹರು ಅಂತಾ ಹೇಳಿದ್ದಾರೆ.
ಮಧ್ಯಪ್ರದೇಶದ ಶಾಸಕ ಆಕಾಶ ವಿಜಯವರ್ಗೀಯ ಜೂನ್ 26ರಂದು ಸರ್ಕಾರಿ ಅಧಿಕಾರಿಗೆ ಥಳಿಸಿದ್ದ. ಈ ಪ್ರಕರಣ ಸಂಬಂಧ ಬಂಧನವಾಗಿತ್ತು. ಒಂದು ದಿನದ ಜೈಲು ವಾಸದ ಬಳಿಕ ಜಾಮೀನು ಸಿಕ್ಕಿದೆ.