ಕಲಾಗ್ರಾಮದಲ್ಲಿ ಕವಿಗೆ ವಿದಾಯ

339

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಶುಕ್ರವಾರ ಮಧ್ಯಾಹ್ನ ನಿಧನರಾದ ಹಿರಿಯ ಕವಿ ಡಾ.ಸಿದ್ಧಲಿಂಗಯ್ಯನವರ ಅಂತ್ಯಕ್ರಿಯೆ ನಗರದ ಜ್ಞಾನ ಭಾರತಿ ಕ್ಯಾಂಪಸ್ ನ ಕಲಾಗ್ರಾಮದಲ್ಲಿ ನೆರವೇರಿತು. ಸಕಲ ಸರ್ಕಾರಿ ಗೌರವ ಹಾಗೂ ಬೌದ್ಧ ಧರ್ಮದ ವಿಧಿ ವಿಧಾನಗಳೊಂದಿಗೆ ಕವಿಗೆ ವಿಧಾಯ ಹೇಳಲಾಯ್ತು.

ಸಿಎಂ ಯಡಿಯೂರಪ್ಪ ಪ್ರವಾಸದಲ್ಲಿರುವ ಕಾರಣ, ಸರ್ಕಾರದ ಪರವಾಗಿ ಡಿಸಿಎಂ ಡಾ.ಅಶ್ವಥನಾರಾಯಣ, ಕಂದಾಯ ಸಚಿವ ಆರ್.ಅಶೋಕ, ಶಾಸಕ ಮುನಿರತ್ನ, ಬಿಬಿಎಂಪಿ ಆಯುಕ್ತ ಗೌರವ ಗುಪ್ತ ಅಂತಿಮ ನಮನ ಸಲ್ಲಿಸಿದ್ರು. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಗಲಿದ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದ್ರು.

ಈ ವೇಳೆ ಅವರ ಒಡನಾಡಿಗಳು, ಅಭಿಮಾನಿಗಳು, ಶಿಷ್ಯರು ಸೇರಿದಂತೆ ಅಪಾರ ಬಂಧುಗಳು ಆಗಮಿಸುವ ಮೂಲಕ, ಹಿರಿಯ ಕವಿಗೆ ಕೊನೆಯ ನಮಸ್ಕಾರ ಸಲ್ಲಿಸಿದ್ರು.




Leave a Reply

Your email address will not be published. Required fields are marked *

error: Content is protected !!