ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ನಾಡಿನ ಹಿರಿಯ ದಲಿತ, ಬಂಡಾತ ಸಾಹಿತಿ, ಕವಿ ಡಾ.ಸಿದ್ಧಲಿಂಗಯ್ಯನವರು ಕರೋನಾ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಹಿರಿಯ ಕವಿಯ ನಿಧನಕ್ಕೆ ಅವರ ಅಭಿಮಾನಿಗಳು, ಸಾಹಿತ್ಯ ವಲಯದ ಗಣ್ಯರು, ರಾಜಕೀಯ ನೇತರಾರು ಸಂತಾಪ ಸೂಚಿಸಿದ್ದಾರೆ. 67 ವರ್ಷದ ಸಿದ್ಧಲಿಂಗಯ್ಯನವರು ದಲಿತ, ಬಂಡಾಯ ಸಾಹಿತಿಗಳಲ್ಲಿ ಪ್ರಮುಖರಾಗಿದ್ದರು.