ಪ್ರಜಾಸ್ತ್ರ ಸುದ್ದಿ
ತುಮಕೂರು: ಬೆಂಗಳೂರಿನಿಂದ ಊರಿಗೆ ಬಂದವರನ್ನ ಸೇರಿಸಿಕೊಳ್ಳಬೇಡಿ. ಅಲ್ಲಿಂದ ಬಂದವರ ಬಗ್ಗೆ ಮಾಹಿತಿ ಕೊಡಿ. ಕೊಡದೆ ಇದ್ರೆ ಅಂತವರ ವಿರುದ್ಧವೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ನಗರದ ಎಸ್ಪಿ ಕಚೇರಿಯಲ್ಲಿ ಪಿಪಿಇ ಕಿಟ್ ವಿತರಣೆ ವೇಳೆ ಮಾತ್ನಾಡಿದ ಅವರು, ನಮ್ಗೆ ಬೆಂಗಳೂರಿಗರಿಂದ ತೊಂದ್ರೆಯಾಗ್ತಿದೆ. ಎಲ್ಲರೂ ಬಂದು ಊರು ಸೇರಿಕೊಂಡರು. ಇದರ ಬಗ್ಗೆ ಮಾಹಿತಿ ಕೊಡಲಿಲ್ಲ. ಸೋಂಕು ದೃಢವಾಗಿ ಊರಿಗೆ ಊರಿ ಸೀಲ್ ಡೌನ್ ಮಾಡಿದ್ವಿ.
ಪರೀಕ್ಷೆ ಮಾಡಿ 48 ಗಂಟೆಯೊಳಗೆ ವರದಿ ನೀಡ್ತೀವಿ. ಬೆಂಗಳೂರಿನಿಂದ ಬಂದವರು, ಊರು ಹೊರಗೆ ಎಲ್ಲಿಯಾದ್ರು ಇರಬೇಕು. ಯಾರ ಸಂಪರ್ಕಕ್ಕೂ ಬರಬಾರದು. ನೆಗಟಿವ್ ಬಂದ್ರೆ ಮನೆಗೆ. ಪಾಸಿಟಿವ್ ಬಂದ್ರೆ ಆಸ್ಪತ್ರೆಗೆ ಎಂದು ಹೇಳಿದ್ದಾರೆ. ಅಲ್ದೇ, ಕಂಟೈನ್ಮೆಂಟ್ ಝೋನ್ ನಲ್ಲಿರುವ ಜನರು ಅನಾವಶ್ಯಕವಾಗಿ ಹೊರಗೆ ಬಂದ್ರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತೆ ಎಂದಿದ್ದಾರೆ.