ಬಿಜೆಪಿ ನಾಯಕರ ಸಾವಿನ ಬಗ್ಗೆ ಪ್ರಜ್ಞಾ ಹೇಳಿಕೆ: ಉಚ್ಛಾಟನೆಗೆ ಕಾಂಗ್ರೆಸ್ ಒತ್ತಾಯ

361

ನವದೆಹಲಿ: ಕೇಂದ್ರದ ಬಿಜೆಪಿ ನಾಯಕರು ಒಬ್ಬರಾದ್ಮೇಲೆ ಒಬ್ಬರು ನಿಧನರಾಗ್ತಿರುವುದರ ಹಿಂದೆ ವಿಪಕ್ಷಗಳ ಮಾರಕ ಶಕ್ತಿಯಿದೆ ಎಂದು ಬಿಜೆಪಿ ಸಂಸದೆ ಹೇಳಿದ್ದಾರೆ. ಮಾಜಿ ವಿತ್ ಸಚಿವ ಅರುಣ ಜೇಟ್ಲಿ, ಮಧ್ಯಪ್ರದೇಶ ಮಾಜಿ ಸಚಿವ ಬಾಬುಲಾಲ್ ಗೌರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ವೇಳೆ ಮಾತ್ನಾಡಿದ ಭೋಪಾಲ್ ಸಂಸದೆ ಪ್ರಜ್ಞಾ, ಪ್ರತಿಪಕ್ಷಗಳ ವಿರುದ್ಧ ಆರೋಪ ಮಾಡಿದ್ದಾರೆ.

ಮಾರಕಶಕ್ತಿಯೊಂದು ಕೆಡಕುಂಟು ಮಾಡ್ತಿದೆ. ಗೋವಾ ಮಾಜಿ ಸಿಎಂ ಪರಿಕ್ಕರ್, ಸುಷ್ಮಾ ಸ್ವರಾಜ್, ಅರುಣ ಜೇಟ್ಲಿ, ಬಾಬುಲಾಲ್ ಗೌರ್ ಹೀಗೆ ಒಬ್ಬರ ಹಿಂದೆ ಒಬ್ಬರು ನಿಧನರಾಗಿದ್ದಾರೆ. ಮಹಾರಾಜ್ ಹೇಳಿದರ ಬಗ್ಗೆ ಯೋಚಿಸಬೇಕಾಗಿದೆ ಎಂದು ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.

ಪ್ರಜ್ಞಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಸಂಸದೆಯನ್ನ ಉಚ್ಛಾಟಿಸಬೇಕೆಂದು ಉತ್ತಾಯಿಸಿದೆ. ಗಣ್ಯರ ಸಾವಿನ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡುವ ಮೂಲಕ ನಿಧನ ಬಗ್ಗೆ ತಮಾಷೆ ಮಾಡ್ತಿದ್ದಾರೆ. ಕೊಡಲೇ ಬಿಜೆಪಿ ಅವರನ್ನ ಉಚ್ಛಾಟಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.




Leave a Reply

Your email address will not be published. Required fields are marked *

error: Content is protected !!