ವಿವಾದಿತ ಸಂಸದೆ ಬಾಯಿಗೆ ಬೀಗ!

328

ನವದೆಹಲಿ: ಸದಾ ಒಂದಲ್ಲ ಒಂದು ವಿವಾದದಿಂದಲೇ ಸುದ್ದಿಯಾಗ್ತಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಗೆ ಹೈಕಮಾಂಡ್ ತಾಕೀತು ಮಾಡಿದೆ ಎನ್ನಲಾಗ್ತಿದೆ. ಸಾರ್ವಜನಿಕವಾಗಿ ಯಾವುದೆ ಹೇಳಿಕೆಗಳನ್ನು ಕೊಡದಂತೆ ಎಚ್ಚರಿಕೆ ನೀಡಿದೆ ಅಂತೆ.

ಕೇಂದ್ರದ ಬಿಜೆಪಿ ನಾಯಕರ ನಿಧನದ ಹಿಂದೆ ವಿಪಕ್ಷಗಳ ಮಾಟ ಮಂತ್ರದ ಕೈವಾಡವಿದೆ ಅನ್ನೋ ವಿವಾದಾತ್ಮಕ ಹೇಳಿಕೆಯನ್ನ ಭೋಪಾಲ್ ಸಂಸದೆ ಇತ್ತೀಚೆಗೆ ನೀಡಿದ್ರು. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬಂದ್ವು. ಇದೀಗ ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ರಾಕೇಶ ಸಿಂಗ್, ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಗೆ ಎಚ್ಚರಿಕೆ ನೀಡಿದ್ದು, ಇದು ಮತ್ತೆ ಮರುಕಳಿಸಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರಂತೆ.




Leave a Reply

Your email address will not be published. Required fields are marked *

error: Content is protected !!