ಗೊಳಸಂಗಿ ಗ್ರಾಮದಲ್ಲಿ ಗರ್ಭಿಣಿಗೆ ಸಿಗದ ಆಂಬ್ಯುಲೆನ್ಸ್ ಸೇವೆ

367

ವಿಜಯಪುರ: ಲಾಕ್ ಡೌನ್ ಪರಿಸ್ಥಿತಿಯಲ್ಲೂ ಗರ್ಭಿಣಿಯೊಬ್ಬರಿಗೆ ತುರ್ತು ವಾಹನ(108) ಸೇವೆ ಲಭ್ಯವಾಗದೆ ಹೋಗಿದೆ. ಚೊಚ್ಚಲ ಹೆರಿಗೆಗೆ ತವರಿಗೆ ಬಂದಿದ್ದ 21 ವರ್ಷದ ಅಶ್ವಿನಿ ವಿಜಯ ಬಾಣಕಾರ ಅನ್ನೋ ಗರ್ಭಿಣಿಗೆ ಆಂಬ್ಯುಲೆನ್ಸ್ ಸೇವೆ ಸಗದೆ ಹೋಗಿದೆ.

ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗರ್ಭಿಣಿಯ ಸಹೋದರ ಶಶಿಕುಮಾರ ತುರ್ತು ಸೇವೆಯ 108 ನಂಬರ್ ಗೆ ಕರೆ ಮಾಡಿದ್ದಾರೆ. ಮಾಹಿತಿಯನ್ನ ಪಡೆದುಕೊಂಡ ಸಿಬ್ಬಂದಿ, ಅವರಿಗೆ ಸಂಪರ್ಕಿಸುತ್ತೇವೆ. ಇವರಿಗೆ ಸಂಪರ್ಕಿಸುತ್ತೇವೆ ಎಂದು ಹೇಳಿದ್ದಾರೆ. ಬಳಿಕ, ಅವಾಚ್ಯ ಮಾತುಗಳಿಂದ ಬೈಯುವ ಮೂಲಕ ನಿಂದಿಸಿದ್ದಾರೆ.

ಗೊಳಸಂಗಿ ಗ್ರಾಮದಲ್ಲಿದ್ದ ಆಂಬ್ಯುಲೆನ್ಸ್ ಕಳೆದ ಎರಡು ತಿಂಗಳ ಹಿಂದೆಯೇ ಅಪಘಾತಕ್ಕಿಡಾಗಿ ಇದುವರೆಗೂ ದುರಸ್ತಿಯಾಗಿಲ್ಲವಂತೆ. ಇದ್ರಿಂದಾಗಿ ಗರ್ಭಿಣಿಗೆ ತುರ್ತು ಸಮಯದಲ್ಲಿ ಸಾಕಷ್ಟು ಸಮಸ್ಯೆಯಾಯ್ತು. ಕಡೆಗೂ ಆಂಬ್ಯುಲೆನ್ಸ್ ಬರ್ಲೇಇಲ್ಲ. ಹೀಗಾಗಿ ಟಂಟಂನಲ್ಲಿ ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಕ್ ಡೌನ್ ತುರ್ತು ಪರಿಸ್ಥಿತಿಯಲ್ಲಿಯೂ ಸರ್ಕಾರಿ ಅಧಿಕಾರಿಗಳ ನಡೆ ನಿಜಕ್ಕೂ ಅಮಾನವೀಯತೆನ್ನ ತೋರಿಸ್ತಿದೆ.




Leave a Reply

Your email address will not be published. Required fields are marked *

error: Content is protected !!