ಗರ್ಭಿಣಿ ಆನೆ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

335

ಪ್ರಜಾಸ್ತ್ರ ಸುದ್ದಿ

ಪಾಲ್ಕಡ್: ದೇಶ್ಯಾದ್ಯಂತ ಭಾರಿ ಸುದ್ದಿಯಾಗಿದ್ದ ಗರ್ಭಿಣಿ ಆನೆ ಸಾವಿನ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಆನೆ ತಿಂದಿದ್ದು ಅನಾನಸ್ ಹಣ್ಣು ಅಲ್ಲ. ಕಾಡು ಹಂದಿಗಳನ್ನ ಕೊಲ್ಲಲು ತೆಂಗಿನಕಾಯಿಯಲ್ಲಿ ಸ್ಫೋಟಕ ಇಡಲಾಗಿತ್ತು. ಅದನ್ನ ತಿಂದಿದೆ ಎಂದು ಹೇಳಲಾಗ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನ ಬಂಧಿಸಲಾಗಿದ್ದು, ಆರೋಪಿ ಕಿಂಗ್ವಿನ್ ವಿಲ್ಸನ್ ಹೇಳಿಕೆ ಪ್ರಕಾರ, ಕಾಡು ಹಂದಿಗಳನ್ನ ಕೊಲ್ಲಲು ಸ್ಫೋಟಕ ತುಂಬುದ್ದು ನಿಜ. ಅದನ್ನ ಆನೆ ತಿಂದಿದೆ ಎಂದು ಹೇಳಿದ್ದಾನೆ. ಎಸ್ಟೇಟ್ ವೊಂದರಲ್ಲಿ ರಬ್ಬರ್ ಟ್ಯಾಪರ್ ಆಗಿ ವಿಲ್ಸನ್ ಕೆಲಸ ಮಾಡ್ತಿದ್ದ. ಎಸ್ಟೇಟ್ ಮಾಲೀಕ ಅಬ್ದುಲ್ ಕರೀಮ್ ಹಾಗೂ ಆತನ ಮಗ ರಿಯಾಜುದ್ದೀನ್ ಎಸ್ಕೇಪ್ ಆಗಿದ್ದಾರೆ.

ಇನ್ನು ಬಂಧಿತ ಆರೋಪಿ ತೋಟದ ಮನೆಯಲ್ಲಿ ಸ್ಫೋಟಕ ತಯಾರಿಸುವುದು ಕಂಡು ಬಂದಿದೆ. ಈತ ಕಾಡು ಪ್ರಾಣಿಗಳನ್ನ ಭೇಟಿಯಾಡಿ ಅವುಗಳನ್ನ ಮಾರಾಟ ಮಾಡ್ತಿರುವುದರಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!