ತಹಶ್ಲೀದಾರ್ ಕಚೇರಿ ಎದರು ಶವ ಇಟ್ಟು ಪ್ರತಿಭಟನೆ

225

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಯುವತಿಯ ವಿಚಾರಕ್ಕೆ ವ್ಯಕ್ತಿಯೊಬ್ಬನ ಮೇಲೆ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ ಪರಿಣಾಮ ಆತ ಮೃತಪಟ್ಟಿದ್ದು, ಪಟ್ಟಣದ ತಹಶ್ಲೀದಾರ್ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ ನಡೆಸಲಾಗಿದೆ. ಮೃತ ರೇವಣಸಿದ್ದ ಸಿದ್ರಾಮಪ್ಪ ಮಲ್ಕಾಪುರ(45) ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.

ಮೃತ ವ್ಯಕ್ತಿ ಸುರಪುರ ತಾಲೂಕಿನವನಾಗಿದ್ದು, ಹಲವು ವರ್ಷಗಳಿಂದ ಕಲಕೇರಿಯಲ್ಲಿ ವಾಸವಾಗಿದ್ದಾನೆ. ಹಾಲಿನ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯ ಅಣ್ಣ ಶಿವರುದ್ರಪ್ಪನ ಮಗಳಿಗೆ ಕೆಲ ಯುವಕರು ಚೂಡಿಯಿಸುತ್ತಿದ್ದಾರಂತೆ. ಹೀಗಾಗಿ ಯುವತಿಯನ್ನು ಕಲಕೇರಿಗೆ ಕರೆದುಕೊಂಡು ಬಂದಿದ್ದನಂತೆ. ಹೀಗಿರುವಾಗ ಕಳೆದ ಅಕ್ಟೋಬರ್ 12ರ ರಾತ್ರಿ ಸಮಯದಲ್ಲಿ ಮೂರ್ನಾಲ್ಕು ಜನರ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರಂತೆ.

ರೇವಣಸಿದ್ದನನ್ನು ವಿಜಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಿಸದೆ ಅಕ್ಟೋಬರ್ 18ರಂದು ಬೆಳಗ್ಗೆ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಇತರರ ಬಂಧನ ಹಾಗೂ ಅವರಿಗೆ ಶಿಕ್ಷೆಯಾಗಬೇಕು. ನಮಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ವಿವಿಧ ದಲಿತ ಪರ ಸಂಘಟನೆಗಳು ಸಾಥ್ ನೀಡಿದವು.




Leave a Reply

Your email address will not be published. Required fields are marked *

error: Content is protected !!