ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಕ್ಕಿಂತ ಜನರ ಜೀವ ಉಳಿಸುವುದು ಮುಖ್ಯ. ಹೀಗಾಗಿ ನಾವು ಸರ್ಕಾರದ ಜೊತೆಗೆ ಕೈ ಜೋಡಿಸುತ್ತೇವೆ. ಕಾಂಗ್ರೆಸ್ ನ 100 ಕೋಟಿ ರೂಪಾಯಿ ಯೋಜನೆಗೆ ಅನುಮತಿ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಕೇಳಿದ್ರು.
ಮಾಧ್ಯಮಗಳ ಜೊತೆ ಮಾತ್ನಾಡಿದ ಅವರು, ಜನರ ಜೀವ ಉಳಿಸುವುದು ಮುಖ್ಯ. ಅದಕ್ಕೆ ಮೊದಲ ಆದ್ಯತೆ ಕೊಡೋಣ. ಅಭಿವೃದ್ಧಿ ಕಾರ್ಯ ಮುಂದೆ ಮಾಡಿಕೊಳ್ಳೋಣ. ಕಾಂಗ್ರೆಸ್ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಳಸಿಕೊಳ್ಳಲು ತೀರ್ಮಾನಿಸಿದ್ದೇವೆ. ಅದಕ್ಕೆ ಅನುಮತಿ ಕೊಡಿ ಎಂದರು.
ಲಸಿಕೆ, ಹಾಸಿಗೆ, ವೆಂಟಿಲೇಟರ್ ಖರೀದಿಗೆ ಅನುಮತಿ ಇದೆ. ಹೀಗಾಗಿ ಸರ್ಕಾರ ಹೇಳಿದ ಶೇಕಡ 25ರಷ್ಟು ಅನುದಾನದಲ್ಲಿ ಕಾಂಗ್ರೆಸ್ ಯೋಜನೆ ರೂಪಿಸಿದೆ. ಇದಕ್ಕೆ ಸರ್ಕಾರ ಅನುಮತಿ ಕೊಡಬೇಕು ಅಂತಾ ಹೇಳಿದ್ರು.