ಅಪ್ಪುಗಾಗಿ ಎಲ್ಲೆಡೆ ಪ್ರಾರ್ಥನೆ

514

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹೃದಯಾಘಾತದಿಂದಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆರೋಗ್ಯ ಚೇತರಿಕೆಗಾಗಿ ಎಲ್ಲೆಡೆ ಪ್ರಾರ್ಥನೆ ನಡೆಸಲಾಗುತ್ತಿದೆ. ವಿಕ್ರಂ ಆಸ್ಪತ್ರೆಯ ವೈದ್ಯರು ಅಪ್ಪು ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ರಾಜಕೀಯ ಗಣ್ಯರು, ಸಿನಿ ರಂಗದ ಗಣ್ಯರು ಸೇರಿದಂತೆ ಎಲ್ಲರೂ ಆಗಮಿಸುತ್ತಿದ್ದಾರೆ. ಸದಾಶಿವನಗರದಲ್ಲಿರುವ ಅವರ ಮನೆಯ ಸುತ್ತಮುತ್ತಲೂ ಬಿಗಿ ಪೊಲೀಸ್ ಬಂದೋಬಸ್ತಿ ಒದಗಿಸಲಾಗಿದೆ. ಎಲ್ಲೆಡೆ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ಲಲ್ಲಿ ಕೇಳಿ ಬರುತ್ತಿರುವ ಮಾತುಗಳು ಸುಳ್ಳಾಗಲಿ ಎಂದು ಪ್ರತಿಯೊಬ್ಬರು ಬೇಡಿಕೊಳ್ಳುತ್ತಿದ್ದಾರೆ.

ಶಿವಣ್ಣನ ಭಜರಂಗಿ-2 ಚಿತ್ರ ಇಂದು ರಿಲೀಸ್ ಆಗಿದೆ. ಈ ಚಿತ್ರ ಪ್ರಿ ರಿಲೀಸ್ ಇವೆಂಟ್ ನ್ನು ಎರಡು ದಿನಗಳ ಹಿಂದೆ ಮಾಡಿದ್ದರು. ಇದರ ಕಾರ್ಯಕ್ರಮದಲ್ಲಿ ಪುನೀತ್ ಸೇರಿ ಹಲವರು ಭಾಗವಹಿಸಿದ್ದರು. ಪುನೀತ್ ಡ್ಯಾನ್ಸ್ ಮಾಡಿ ಸಹ ರಂಜಿಸಿದ್ದರು. ಇಂದು ಶಿವಣ್ಣ ಚಿತ್ರ ನೋಡಲು ಹೋಗಿದ್ದಾಗ ಅವರಿಗೆ ಶಾಕಿಂಗ್ ನ್ಯೂಸ್ ತಿಳಿದು ಬಂದಿದೆ. ತಕ್ಷಣ ಅವರು ಆಸ್ಪತ್ರೆಗೆ ಬಂದಿದ್ದಾರೆ. ಎಲ್ಲರ ಪ್ರಾರ್ಥನೆ ಈಡೇರಲಿ. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿ ಅನ್ನೋದು ಎಲ್ಲರ ಹಾರೈಕೆ.




Leave a Reply

Your email address will not be published. Required fields are marked *

error: Content is protected !!