ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆ ಬಗ್ಗೆ ಪ್ರಶ್ನಿಸಿರುವ ಸಂಸದ ತೇಜಸ್ವಿ ಸೂರ್ಯಗೆ ತಿರುಗೇಟು ನೀಡಿದ್ದು, ನನ್ನ ಶಿಕ್ಷಣ, ವಿದ್ಯಾರ್ಹತೆ ಬಗ್ಗೆ ಅಫಿಡವಿಟ್ ನಲ್ಲಿದೆ. ನನ್ನ ಬಗ್ಗೆ ಕಾಳಜಿ ಇರುವ ಸಂಸದರು ಅವರ ಸುಪ್ರೀಂ ಲೀಡರ್ ವಿದ್ಯಾರ್ಹತೆ ಬಗ್ಗೆ ತಿಳಿದುಕೊಳ್ಳಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಸಂಸದರಿಗೆ ನನ್ನ ವಿದ್ಯಾರ್ಹತೆ ತಿಳಿದಿರಬಹುದು. ಆದರೆ, ಯಾರಾದರೂ ಪ್ರಧಾನಿ ಪದವಿ ಬಗ್ಗೆ ಆರ್ ಟಿಐನಲ್ಲಿ ಕೇಳಿದರೆ ಕೊಡಬೇಡಿ ಎಂದಿದ್ದಾರೆ ಅಂತಾ ಕಾಲೆಳೆದಿದ್ದಾರೆ. ಶಾಲಾ ಪಠ್ಯಪುಸ್ತಕಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಠದ ವಿಚಾರವಾಗಿ ಅವರ ವಿದ್ಯಾರ್ಹತೆ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತನಾಡಿದ ಮೇಲೆ ಈ ವಾಗ್ವಾದಗಳು ಶುರುವಾಗಿವೆ.