ಪ್ರಜಾಸ್ತ್ರ ಸುದ್ದಿ
ಮಧುರೈ: ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮಿಳುನಾಡಿಗೆ ಭೇಟಿ ನೀಡಿದ ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ, ಜಲ್ಲಿಕಟ್ಟು ವೀಕ್ಷಣೆ ಮಾಡಿ, ಅಲ್ಲಿನ ಸಂಪ್ರದಾಯದಲ್ಲಿ ಭಾಗಿಯಾದ್ರು. ಈ ವೇಳೆ ಮಾತ್ನಾಡಿದ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ರೈತರ ಮಾಡ್ತಿರುವ ಹೋರಾಟದ ಬಗ್ಗೆ ನನ್ಗೆ ಹೆಮ್ಮೆ ಇದೆ. ನಾವು ಅವರ ಪರ ಯಾವಾಗ್ಲೂ ನಿಲ್ಲುತ್ತೇವೆ. ಈ ಬಗ್ಗೆ ಧ್ವನಿ ಎತ್ತುತ್ತೇವೆ. ನಾನು ಹೇಳುವುದನ್ನ ಬರೆದಿಟ್ಟುಕೊಳ್ಳಿ ಕೃಷಿ ಕಾನೂನುಗಳನ್ನ ಕೇಂದ್ರ ಸರ್ಕಾರ ಹಿಂದಕ್ಕೆ ಪಡೆಯಲೇಬೇಕಾಗುತ್ತೆ ಎಂದು ರಾಹುಲ ಗಾಂಧಿ ಕಿಡಿ ಕಾರಿದ್ದಾರೆ.