ರೈಲ್ವೆ ನಿಲ್ದಾಣದ ಹಮಾಲರೊಂದಿಗೆ ರಾಹುಲ್ ಸಂವಾದ

211

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ಜನ ಸಾಮಾನ್ಯರೊಂದಿಗೆ ಹೆಚ್ಚಿಗೆ ಬೆರೆಯುತ್ತಿದ್ದಾರೆ. ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಅವರ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿದ್ದಾರೆ. ಇದೇ ರೀತಿ ಇಂದು ಆನಂದ್ ವಿಹಾರ್ ರೈಲು ನಿಲ್ದಾಣದ ಕೂಲಿಗಳೊಂದಿಗೆ ಸಂವಾದ ನಡೆಸಿದರು.

ಸುದೀರ್ಘವಾಗಿ ಅವರೊಂದಿಗೆ ಚರ್ಚಿಸಿದರು. ಅಲ್ಲಿನ ಕೂಲಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು. ತಮ್ಮನ್ನು ಭೇಟಿಯಾಗುವಂತೆ ಒಂದು ತಿಂಗಳ ಹಿಂದೆ ಕೇಳಿದ್ದರು. ಅವರ ಮಾತಿನಂತೆ ಇಂದು ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಕೂಲಿಗಳ ಸಮವಸ್ತ್ರವಾದ ಕೆಂಪು ಶರ್ಟ್ ಹಾಕಿಕೊಂಡು ಲಗೇಜು ಹೊತ್ತು ನಡೆದರು.




Leave a Reply

Your email address will not be published. Required fields are marked *

error: Content is protected !!