ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮಾನನಷ್ಟಮೊಕದ್ದಮೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿರುವ ಹಿನ್ನಲೆಯಲ್ಲಿ, ರಾಹುಲ್ ಗಾಂಧಿ ಅವರ ಸಂಸದ ಸದಸ್ಯತ್ವ ಮರುಸ್ಥಾಪನೆ ಮಾಡಲಾಗಿದೆ. ಈ ಕುರಿತು ಲೋಕಸಭೆ ಸಚಿವಾಲಯ ಸೋಮವಾರ ಹೇಳಿಕೆ ಬಿಡುಗಡೆ ಮಾಡಿದೆ.
ಗುಜರಾತ್ ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಸುಪ್ರೀಂನಲ್ಲಿ ಶುಕ್ರವಾರ ವಿಚಾರಣೆ ನಡೆದು, ತಾತ್ಕಾಲಿಕ ತಡೆ ನೀಡಿದೆ. ಹೀಗಾಗಿ ಅವರ ಸಂಸದ ಸ್ಥಾನ ಅನರ್ಹತೆಯನ್ನು ರದ್ದುಪಡಿಸಲಾಗಿದೆ.