ಮೂರು ರಾಜ್ಯಗಳಲ್ಲಿ ಮತ್ತೆ ಮಳೆ ಸುರಿಯಲಿದೆ

317

ಬೆಂಗಳೂರು: ಈಗಾಗ್ಲೇ ಮಳೆ ಮತ್ತು ಪ್ರವಾಹದಿಂದ ಅಕ್ಷರಶಃ ಬದುಕು ಕಳೆದುಕೊಂಡಿರುವ ಕರ್ನಾಟಕದ ಅನೇಕ ಜಿಲ್ಲೆಗಳು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುತ್ತೆ ಅನ್ನೋ ವರದಿಯಾಗಿದೆ. ಕೆಲ ದಿನಗಳ ಕಾಲ ಮತ್ತೆ ಈ ಮೂರು ರಾಜ್ಯಗಳಲ್ಲಿ ಮಳೆಯಾಗಲಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ.

ಬೆಳಗಾವಿ, ಗೋಕಾಕ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ಮಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದ ಅನೇಕ ಕಡೆ ಸಾಧಾರಣ ಮಳೆಯಾಗಲಿದೆ. ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇನ್ನು ಮಹಾರಾಷ್ಟ್ರದ ಪುಣೆ, ಕೋಲ್ಹಾಪುರ, ಸತಾರ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೆ ರೀತಿ ಕೇರಳದ ಎರ್ನಾಕುಲಂ, ಆಲಪುಳ್ಳ, ಇಡುಕ್ಕಿ, ಪಟ್ಟನತಿಂಟು, ಕೊಲ್ಲಂ, ಪಾಲಕ್ಕಾಡ, ತ್ರಿಶೂರ್, ವೈನಾಡು, ಮಲಪ್ಪುರ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!