ಅಭಿನಂದನಗೆ ನಾಳೆ ‘ವೀರ ಚಕ್ರ’ ಪುರಸ್ಕಾರ

355

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಿಗೆ ಸೇನಾ ಪಡೆಯ ಅತ್ಯುತ್ತಮ ಗೌರವವಾದ ವೀರ ಚಕ್ರ ಪುರಸ್ಕಾರ ನೀಡುವ ಮೂಲಕ ಭಾರತ ಸರ್ಕಾರ ಗೌರವಿಸ್ತಿದೆ.

ಕಳೆದ ಫೆಬ್ರವರಿ 27ರಂದು ಪಾಕ್ ಪಡೆಯ ಎಫ್ 16 ಅನ್ನೋ ಯುದ್ಧ ವಿಮಾನವನ್ನ, ಕಾಶ್ಮೀರದ ಗಡಿ ನಿಯಂತ್ರಣ ಬಳಿ ಹೊಡೆದು ಉರುಳಿಸಿದ್ರು. ತಮ್ಮ ಮಿಗ್-21 ಯುದ್ಧ ವಿಮಾನದಿಂದ ಹೊಡೆದುರುಳಿಸಿದ ಬಳಿಕ, ಪಾಕ್ ಕ್ಷಿಪಣಿ ತಾಗಿ ವಿಮಾನ ಪತನಗೊಂಡಿತ್ತು. ಆಗ ಪ್ಯಾರಾಚೂಟ್ ಮೂಲಕ ಜಿಗಿದು ಪ್ರಣಾಪಾಯದಿಂದ ಪಾರಾಗಿದ್ರು.

ಪಾಕ್ ನೆಲದಲ್ಲಿ ಇಳಿದಿದ್ದ ಅವರನ್ನ ಪಾಕ್ ಸೇನೆ ವಶಕ್ಕೆ ಪಡೆದುಕೊಂಡಿತ್ತು. ಆಗ ಇಡೀ ದೇಶಾದ್ಯಂತ ಅಭಿನಂದನ್ ಸೇಫ್ ಆಗಿ ವಾಪಸ್ ತಾಯ್ನಾಡಿಗೆ ಬರ್ಲಿ ಅನ್ನೋ ಪ್ರಾರ್ಥನೆ ನಡೆಯಿತು. ಮುಂದೆ ಮಾರ್ಚ್ 1ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಕಳುಹಿಸಿಕೊಡಲಾಗಿತ್ತು. ಅವರ ಈ ಶೌರ್ಯವನ್ನ ಪರಿಗಣಿಸಿ ನಾಳೆ ಆಗಸ್ಟ್ 15, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!