ಸಿಂದಗಿಯಲ್ಲಿ ಮಳೆ: ಪುರಸಭೆ ಸದಸ್ಯರೇ ಇಲ್ನೋಡಿ…

581

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನಲ್ಲಿ ಭರ್ಜರಿ ಮಳೆ ಸುರಿಯುತ್ತಿದೆ. ಕಳೆದ ಸುಮಾರು 15 ದಿನಗಳಿಂದ ಮಳೆ ನಿಂತು ಹೋಗಿತ್ತು. ಬಿಸಿಲಿನ ತಾಪದಿಂದ ಜನರು ಹೈರಾಣಾಗಿದ್ರು. ಅಲ್ದೇ, ಕಳೆದ ಎರಡು ದಿನಗಳಿಂದ ಸಾಕಷ್ಟು ಶಕೆಯಿದ್ದು, ಜನರು ಮಳೆಗಾಗಿ ಎದುರು ನೋಡ್ತಿದ್ರು.

ಇಂದು ಸಾಂಯಕಾಲ ಭರ್ಜರಿ ಮಳೆ ಶುರುವಾಗಿದೆ, ಬೃಹತ್ ಚರಂಡಿಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗಿದ್ದು, ಸಾರ್ವಜನಿಕರಿಗೆ ಒಂದಿಷ್ಟು ಕಷ್ಟವಾಗ್ತಿದೆ. ಗೋಲಗೇರಿ ರೋಡಿನ ಮೇಲೆಯೇ ಚರಂಡಿ ನೀರು ಹರಿಯುತ್ತಿವೆ. ಕನಕದಾಸ ಸರ್ಕಲ್ ಏರಿಯಾ, ಅಂಬೇಡ್ಕರ್ ಸರ್ಕಲ್ ಪಕ್ಕದ ರಸ್ತೆ ಸೇರಿದಂತೆ ಅನೇಕ ಕಡೆ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು, ಮಳೆ ಬಂದ್ರೆ ಜನರು ಓಡಾಡುವುದು ಕಷ್ಟವಾಗ್ತಿದ್ದು, ಪುರಸಭೆ ಇದ್ದು ಇಲ್ಲದಂತಾಗಿದೆ.

ವಾರ್ಡ್ ನಂಬರ್ 2 ಹಾಗೂ 3 ರಲ್ಲಿ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣದ ಸಲುವಾಗಿ ಸುಮಾರು ಒಂದು ತಿಂಗಳ ಮೊದ್ಲೇ ಅಲ್ಲಿನ ಕೆಲ ಡಬ್ಬಾ ಅಂಗಡಿಗಳನ್ನ, ಶೆಡ್ ಗಳನ್ನ ತೆರವುಗೊಳಿಸಲಾಯ್ತು. ಆದ್ರೆ, ಇಂದಿಗೂ ಆ ರಸ್ತೆ ಸರಿಮಾಡಿಸಲು ಆಗ್ತಿಲ್ಲ. ಈ ಸಂಬಂಧ 2ನೇ ವಾರ್ಡ್ ಸದಸ್ಯೆ ಉಮಾದೇವಿ ಸುಲ್ಫಿ ಹಾಗೂ 3ನೇ ವಾರ್ಡ್ ಸದಸ್ಯ ಶ್ರೀಶೈಲ ಬೀರಗೊಂಡ ಅವರಿಗೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ರೂ ಕೆಲಸ ಮಾಡಿಸ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!