ಅಪೂರ್ಣ ಬಸ್ ನಿಲ್ದಾಣ ಉದ್ಘಾಟನೆ: ಕೊಳ್ಳೇಗಾಲದಲ್ಲಿ ಪ್ರತಿಭಟನೆ

128

ಪ್ರಜಾಸ್ತ್ರ ಸುದ್ದಿ

ಮೈಸೂರು: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜನರ ಬಹುವರ್ಷಗಳ ಕನಸಾಗಿದ್ದ ಹೈಟಕ್ ಬಸ್ ನಿಲ್ದಾಣ ಪೂರ್ಣಗೊಳ್ಳುವ ಮೂದಲೇ, ಉಸ್ತುವಾರಿ ಸಚಿವ ವಿ.ಸೋಮಣ್ಣ ಇಂದು ಉದ್ಘಾಟನೆ ಮಾಡಿದ್ದಾರೆ ಎಂದು, ನಗರಸಭೆ ಸದಸ್ಯರು ಪ್ರತಿಭಟನೆ ನಡೆಸಿದರು.

ಬರೋಬ್ಬರಿ ಐದುವರೆ ವರ್ಷಗಳಿಂದ ನಡೆಯುತ್ತಿರುವ ಹೈಟಕ್ ಬಸ್ ನಿಲ್ದಾಣ ಇನ್ನೂ ಪೂರ್ಣಗೊಂಡಿಲ್ಲ. ಶಾಸಕ ಎನ್.ಮಹೇಶ್, ನಗರಸಭೆ ಸದಸ್ಯರು ಸೇರಿದಂಎ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಭೆ ಕರೆಯದೆ ಏಕಪಕ್ಷೀಯಕವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದರು.

ಯುಜಿಡಿ ಶೌಚಾಲಯ ಇನ್ನು ಆಗಿಲ್ಲ. ಮಹಿಳಾ ಪ್ರಯಾಣಿಕರು ಶೌಚಾಲಯಕ್ಕೆ ಎಲ್ಲಿ ಹೋಗಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ನಗರಸಭೆಯಿಂದ ಮತ್ತೊಮ್ಮೆ ಉದ್ಘಾಟನೆ ಮಾಡುತ್ತೇವೆ ಎಂದು ಅಧ್ಯಕ್ಷೆ ರೇಖಾ ಹೇಳಿದರು. ಇನ್ನು ಸಚಿವ ವಿ.ಸೋಮಣ್ಣ ಎದುರೆ ನಗರಸಭೆ ಸದಸ್ಯರು ತಮ್ಮ ಆಕ್ರೋಶ ಹೊರ ಹಾಕಿದರು.




Leave a Reply

Your email address will not be published. Required fields are marked *

error: Content is protected !!