ಪ್ರಜಾಸ್ತ್ರ ಸುದ್ದಿ
ಮೈಸೂರು: ವಿಜಯಪುರದಿಂದ ತಮಿಳುನಾಡಿಗೆ ಕುರಿಗಳನ್ನು ಸಾಗಾಟ ಮಾಡಲಾಗುತ್ತಿದ್ದ ವಾಹನ ಪಲ್ಟಿಯಾದ ಪರಿಣಾಮ 25 ಕುರಿಗಳು ಮೃತಪಟ್ಟಿವೆ. ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹತ್ತಿರ ಬುಧವಾರ ನಡೆದಿದೆ.
85 ಕುರಿಗಳನ್ನು ತೆಗೆದುಕೊಂಡು ಹೊರಟಿದ್ದಾಗ ಸತ್ತೇಗಾಲ ತಿರುವಿನಲ್ಲಿ ಬುಲೆರೋ ವಾಹನ ಪಲ್ಟಿಯಾಗಿದೆ. ಚಾಲಕ ಭಾಗೇಶ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.