ವಿಜಯಪುರದಲ್ಲಿ ಬೆತ್ತಲೆ ಓಡಾಟ.. ಅಷ್ಟಕ್ಕೂ ಆತ ಯಾರು?

755

ವಿಜಯಪುರ: ಗುಮ್ಮಟನಗರಿಯಲ್ಲಿ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡಾಟ ನಡೆಸಿದ ಘಟನೆ ನಡೆದಿದೆ. ನಗರದಲ್ಲಿ 7 ಕರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಕೆಲ ಏರಿಯಾಗಳಲ್ಲಿ ಸೀಲ್ ಡೌನ್ ಮಾಡಲಾಗಿದೆ. ಇದರ ನಡುವೆ ಸೀಲ್ ಡೌನ್ ಆದ ಬಂಡೆ ಕಮಾನ್ ರಸ್ತೆಯಲ್ಲಿಯೇ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.

ಹೀಗೆ ಬಟ್ಟೆಯಲ್ಲಿದೆ ಬೆತ್ತಲೆಯಾಗಿ ಬೈಕ್ ಮೇಲೆ ಹೋಗ್ತಿರುವ ದೃಶ್ಯ ನಿನ್ನೆ ಸಂಜೆ ಕಂಡು ಬಂದಿದೆ. ಇದು ಭಾರೀ ಚರ್ಚೆಗೆ ಸಹ ಗ್ರಾಸವಾಗಿತ್ತು. ಇದರ ರಹಸ್ಯ ತಿಳಿದಾಗ, ಮಾನಸಿಕ ಅಸ್ವಸ್ಥನೊಬ್ಬ ಬಟ್ಟೆಯಿಲ್ಲದೆ ಬೆತ್ತಲೆಯಾಗಿ ತಿರುಗಾಡ್ತಿದ್ದನಂತೆ. ಅದೆ ದಾರಿಯಲ್ಲಿ ಹೋಗ್ತಿದ್ದ ಯುವಕನೊಬ್ಬ ಆತನಿಗೆ ತನ್ನ ಶರ್ಟ್ ಬಿಚ್ಚಿಕೊಟ್ಟಿದ್ದಾನೆ.

ಮಾನಸಿಕ ಅಸ್ವಸ್ಥನಿಗೆ ಬಟ್ಟೆಕೊಟ್ಟಿದ್ದು ನಿಜವಾಗಿದ್ರೆ ಆತನನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದು ಎಲ್ಲಿಗೆ? ಸೀಲ್ ಡೌನ್ ಇದ್ದ ಏರಿಯಾದಲ್ಲಿ ಯುವಕ ಬೈಕ್ ಮೇಲೆ ಬಂದಿದ್ದು ಹೇಗೆ ಅನ್ನೋ ಹಲವು ಪ್ರಶ್ನೆಗಳು ಮೂಡಿದ್ದು, ನಗರದ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಆದ್ರೆ, ಕೆಲವರು ಇದು ವಿಜಯಪುರ ದೃಶ್ಯವಲ್ಲ. ಬೆಳಗಾವಿಯಲ್ಲಿ ಈ ಹಿಂದೆ ನಡೆದ ಘಟನೆ ಎಂದು ಹೇಳಲಾಗ್ತಿದೆ. ಹೀಗಾಗಿ ಜನರಲ್ಲಿ ಸಾಕಷ್ಟು ಗೊಂದಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!