ಸಕ್ಕರೆನಾಡಿನಲ್ಲಿ ನಿಲ್ಲದ ಚಿರತೆ ದಾಳಿ

372

ಮಂಡ್ಯ: ಜಿಲ್ಲೆಯಲ್ಲಿ ಚಿರತೆ ಹಾವಳಿ ಇನ್ನೂ ನಿಂತಿಲ್ಲ. ಹೀಗಾಗಿ ಮತ್ತೆ ಇದೀಗ ತೋಟದ ಮನೆಯಲ್ಲಿ ಸಾಕಿದ್ದ ನಾಯಿಯನ್ನು ತಿಂದು ಹಾಕಿದೆ. ಮಂಡ್ಯ ಶೀಳನೆರೆ ಹೋಬಳಿಯ ಹಿರಳಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೋಹನ್ ಎಂಬುವವರಿಗೆ ಸೇರಿದ ತೋಟದಲ್ಲಿ ನಿನ್ನೆ  ರಾತ್ರಿ  ಸುಮಾರು 9.30 ರ ಸಮಯದಲ್ಲಿ ಚಿರತೆ ದಾಳಿ ಮಾಡಿದೆ. ಇದ್ರಿಂದಾಗಿ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೂ ಚಿರತೆ ದಾಳಿಗೆ ನಾಯಿ ಬಲಿಯಾಗಿತ್ತು. ಹೀಗಾಗಿ ಕೂಡಲೇ ಚಿರತೆಯನ್ನು ಹಿಡಿದು ಅರಣ್ಯ ಕ್ಕೆ ಬಿಡಲು ಗ್ರಾಮಸ್ಥರು ಅರಣ್ಯ ಇಲಾಖೆಗೆ  ಆಗ್ರಹಿಸಿದ್ದಾರೆ.

ಹೀಗೆ ಪದೆಪದೆ ಚಿರತೆ ದಾಳಿ ನಡೆಯುತ್ತಿದ್ರೂ ಅರಣ್ಯ ಇಲಾಖೆ ಕ್ರಮ ತೆಗೆದುಕೊಳ್ಳದೆ ಹೋದ್ರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!