ಆಲಮೇಲ/ಸಿಂದಗಿ: ವಿಜಯಪುರ ಜಿಲ್ಲೆಯ ನೂತನ ತಾಲೂಕು ಆಲಮೇಲದಲ್ಲಿ ಭರ್ಜರಿ ಮಳೆಯಾಗ್ತಿದೆ. ಗುಡುಗು ಸಹಿತ ಭಾರೀ ಮಳೆಯಾಗ್ತಿದ್ದು, ಬೇಸಿಗೆ ಬಿಸಿಲಿಗೆ ಹೈರಾಣಾಗಿರುವ ಜನರಿಗೆ ಒಂದಿಷ್ಟು ಖುಷಿಯಾಗಿದೆ.
ತಾಲೂಕಿನ ತಾರಾಪೂರ, ಕಡಣಿ, ತಾವರಖೇಡ, ಮದನ ಹಳ್ಳಿ, ಕುರುಬತಹಳ್ಳಿ ಇತರೆ ಗ್ರಾಮಗಳಲ್ಲಿ ಭಾರಿ ಬಿರುಗಾಳಿ ಸಮೇತ ಮಳೆಯಾಗಿದೆ. ಹೀಗಾಗಿ ಕೆಲವು ಹಲವಾರು ಮರಗಳು ನೆಲಕ್ಕುರುಳಿವೆ.
ಇನ್ನು ಸಿಂದಗಿ ಹಾಗೂ ದೇವರಹಿಪ್ಪರಗಿ ಪಟ್ಟಣದಲ್ಲಿಯೂ ಭರ್ಜರಿಯಾಗಿ ಬಿರುಗಾಳಿ ಬೀಸಿದೆ. ಅಪಾರ ಪ್ರಮಾಣದಲ್ಲಿ ಬೀಸಿದ ಬಿರುಗಾಳಿಯಿಂದಾಗಿ ಅಂಗಡಿಗಳ ಮುಂದಿನ ಬೋರ್ಡ್ ಗಳು ಹಾರಿ ಹೋಗಿವೆ. ಕೆಲವು ಕಡೆ ಮುರಿದು ಬಿದ್ದಿವೆ. ಇದ್ರಿಂದಾಗಿ ಈ ಎರಡು ಪಟ್ಟಣಗಳಲ್ಲಿ ವಿದ್ಯುತ್ ಸಂಪರ್ಕ ತೆಗೆದು ಹಾಕಲಾಗಿದೆ.